ಸುದ್ದಿ ಕನ್ನಡ ವಾರ್ತೆ
80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅಬಕಾರಿ ತನಿಖಾ ಠಾಣೆ ಅನಮೋಡದಲ್ಲಿ ವಿಜೃಂಭಣೆ ಯಿಂದ ಆಚರಿಸಲಾಯಿತು, ಅನಮೋಡ ಅಬಕಾರಿ ತನಿಖಾ ಠಾಣೆ ಗೋವಾ ರಾಜ್ಯಕ್ಕೆ, ಕರ್ನಾಟಕ ರಾಜ್ಯದಿಂದ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ದಲ್ಲಿದೆ.ಹಲವಾರು ಅಪರಾಧ ಅಕ್ರಮ ಪ್ರಕಾರಣ ಗಳನ್ನು ಈ ಅನಮೋಡ ತನಿಖಾ ಠಾಣೆಯ ಸಿಬ್ಬಂದಿಗಳು ಕಂಡು ಹಿಡಿದು ಭೇಷ್ ಎನಿಸಿಕೊಂಡಿದ್ದಾರೆ, ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ, ಈ ತನಿಖಾ ಠಾಣೆ ಯಲ್ಲಿ ಕರ್ತವ್ಯ ದ ನಡುವೆಯೂ 80 ನೇ ಸ್ವಾತಂತ್ರ್ಯ ಉತ್ಸವ ವನ್ನು ಎಲ್ಲರೂ ಸೇರಿ ಸಂಭ್ರಮ ದಿಂದ ಆಚರಿಸಿದ್ದಾರೆ, ಉಪ ನಿರೀಕ್ಷಕರಾದ ಟಿ.ಬಿ.ಮಲ್ಲಣ್ಣವರ,ರಾಷ್ಟ್ರ ದ್ವಜಾರೋಹಣ ನಡೆಸಿ ಮಾತನಾಡುತ್ತ,ದೇಶ ರಕ್ಷಣೆ ಯ ಜೊತೆಗೆ ಕರ್ತವ್ಯ ಪಾಲನೆ,ಹಾಗೂ ಜೀವನದಲ್ಲಿ ಶಿಸ್ತು ಸಯ್ಯಮ ಪಾಲನೆ ಎಷ್ಟು ಮುಖ್ಯ ಎನ್ನುವ ಕುರಿತು ಹೇಳಿದರು.

ಈ ಸಂದರ್ಭದಲ್ಲಿ, ಸಿಬ್ಬಂದಿಗಳಾದ ಸಂತೋಷ ಸುಬ್ಬಣ್ಣನವರ್, ಶ್ರೀಕಾಂತ ಜಾಧವ, ಎಂ ಎಚ್ ಅನವಟ್ಟಿ, ವಿಕ್ರಮ ಬಿಡಿಕರ್, ರಮೇಶ್ ರಾಠೋಡ, ಆನಂದ ರೆಡ್ಡಿ, ಗಜಾನ ನಾಯ್ಕ, ಈರಣ್ಣ ಗಾಳಿ ಮತ್ತು ಗೃಹರಕ್ಷಕ ಸಿಬ್ಬಂದಿಗಳು, ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ದೇಶ ಪ್ರೇಮ ತೋರಿಸಿದರು.