ಸುದ್ದಿ ಕನ್ನಡ ವಾರ್ತೆ
ಕರ್ನಾಟಕ ದಲ್ಲಿ ಇರುವ ಕಾಂಗ್ರೆಸ್ ಸರಕಾರದಲ್ಲಿ ಸ್ವಲ್ಪ ಬದಲಾವಣೆ ಆಗಿ ಡಿ ಕೆ ಶಿವಕುಮಾರ್ ಅವರು ಮುಖ್ಯ ಮಂತ್ರಿ ಯಾಗಿ ಪಟ್ಟ ವೆರಿದ್ದಾರೆ, ಆದರೆ ಅವರ ಜೊತೆಯಲ್ಲಿ, ಮೊದಲನೇ ಸಲವೇ ಕ್ಯಾಬಿನೆಟ್ ದರ್ಜೆ ಸಚಿವ ರಾಗುವ ಅರ್ಹತೆ ನಮ್ಮ ಜಿಲ್ಲೆಯ ಶಾಸಕರಿಗೆ ಇಲ್ಲವೇ ಎಂಬ ಅನುಮಾನ ಜಿಲ್ಲೆಯ ಪ್ರಜ್ಞಾ ವಂತರನ್ನು ಕಾಡುತ್ತಿದೆ, ಅಧಿಕಾರ ಇದ್ದಾಗ ಕೇವಲ ರಾಜಕೀಯವನ್ನೇ ದೊಡ್ಡದು ಮಾಡುತ್ತಾ ಸಮಗ್ರವಾಗಿ ಚಿಂತಿಸದೇ ಇರುವುದು,ಜನರ ಸೇವೆಯೇ ಜನಾರ್ಧನನ ಸೇವೆ ಎಂದು, ಕೆಲಸ ಮಾಡದೇ ಇರುವದು, ಸುತ್ತ ಮುತ್ತ ಇರುವ ಜನ ಹೇಳಿದ್ದನ್ನೇ ಕೇಳುತ್ತಾ ನಡೆದು ಕೊಂಡಿರುವುದು, ಮತ್ತು ಜಿಲ್ಲೆಯ ಬಗ್ಗೆ ದ್ವನಿ ಎತ್ತಿ ಸಮಸ್ಯೆ ಗಳನ್ನು ಸರಕಾರದ ಮಟ್ಟದಲ್ಲಿ ಗಮನಿಸುವಂತೆ ಮಾಡದೇ ಇರುವುದೇ ಇದಕ್ಕೆ ಕಾರಣವೇ ಎಂಬ ಕೊರಗು ಜನರನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳು ಜನರನ್ನು ಕಾಡುತ್ತಿದೆ ಇದು ನಿನ್ನೆ ಮೊನ್ನೆಯ ಕತೆಯಲ್ಲ ಮತ್ತು ಸುಲಭವಾಗಿ ಸ್ಥಳೀಯ ವಾಗಿ ಬಗೆಹರಿಯುವಂತಾದ್ದಲ್ಲ,
ಸರಕಾರದ ಮಟ್ಟದಲ್ಲಿ, ಮಂತ್ರಿಗಳೇ ಮಾಡಬೇಕಾದವುಗಳು, ಆ ಬಗ್ಗೆ ಸಚಿವರೇ ಗಮನಿಸದೇ ಇದ್ದಾಗ ಬಗೆಹರಿಯುವುದಾದರೂ ಹೇಗೆ, ಚುನಾವಣೆ ವೇಳೆಯಲ್ಲಿ ರಾಜಕೀಯ ಮಾಡಿದರೂ, ನಂತರ ಎಲ್ಲರನ್ನೂ ಕೂಡಿಸಿ ಕೊಂಡು ಸಮಸ್ಯೆ ಪರಿಹರಿಸುವ ಪದ್ಧತಿ ಇದ್ದಿದ್ದರೆ ಅಂತವರು ರಾಜ್ಯ ಮಟ್ಟದಲ್ಲೂ ಮಿಂಚುತ್ತಿದ್ದರು, ಅಂತವರು ಸರಕಾರದ ಗಮನಕ್ಕೂ ಬಂದು ಮೊದಲ ಸಾಲಿನಲ್ಲೇ ಮಂತ್ರಿ ಯಾಗುತ್ತಿದ್ದರು, ಅದೇನೂ ಮಾಡದೇ ಕೇವಲ ಜಿಲ್ಲಾ ಪ್ರಾತಿನಿದ್ಯವೋ, ಯಾವುದೊ, ಮೀಸಲಾತಿಗೋ ಕಾಯುವ ಸ್ಥಿತಿ ಬಂತಲ್ಲ, ಎಂಬ ಕೊರಗು ಸಾಕಷ್ಟು ಜನರನ್ನು ಕಾಡಿದೆ. ಅರಣ್ಯ ಅತಿಕ್ರಮಣ ಸಮಸ್ಯೆ, ರೈಲ್ವೆ ಸಮಸ್ಯೆ, ಸೇರಿದಂತೆ ಪ್ರತಿಯೊಂದು ತಾಲೂಕಿನಲ್ಲಿಯೂ ಬೇರೆ ಬೇರೆ ಸಮಸ್ಯೆಗಳು ಜನರನ್ನು ಕಾಡುತ್ತಿವೆ, ಆದರೆ ಈ ಬಗ್ಗೆ ಸರಕಾರದ ಮಟ್ಟಕ್ಕೆ ಅವು ತಲುಪುವುದೇ ಇಲ್ಲ, ಬಗೆಹರಿಯುವುದೂ ಇಲ್ಲ, ಇದನ್ನೆಲ್ಲ ಮಾಡಬೇಕಾದವರು ಆಯಾ ಸರಕಾರದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಬೇಕಾದ ಮಂತ್ರಿಗಳು, ಅಂತ ಮಂತ್ರಿಗಳಿಗೆ ಸದ್ಯ ಇಂದಿನ ಸರಕಾರದಲ್ಲಿ ಜಿಲ್ಲೆಯ ಯೋಗ್ಯ ಶಾಸಕರು ಕಂಡು ಬಂದಿಲ್ಲ ಎಂದರೆ ಜಿಲ್ಲೆಯ ಜನತೆಗೆ ಇದು ತುಂಬಾ ಬೇಸರದ ಸಂಘತಿ. ಜಿಲ್ಲೆಯ ಜನತೆ ತಮ್ಮ ಅಳಿವು ಉಳಿವಿನ ಸಮಸ್ಯೆಗಳು ಬಂದಾಗ ರಸ್ತೆ ಗಿಳಿದು ಪ್ರತಿಭಟನೆ ಮಾಡಿವೆ, ಮಠ ಮಂದಿರಗಳು ಸಹಕಾರ ನೀಡಿವೆ, ಆದರೆ ಜಿಲ್ಲೆ ಯ ಯಾವವೊಬ್ಬ ಶಾಸಕರೂ ಸಹಕಾರ ನೀಡದಿರುವುದು ಅವರ ಯೋಗ್ಯತೆಗೆ, ತಕ್ಕುದಲ್ಲ, ಜನರಿಂದ ನಾನು ಜನರಿಗೋಸ್ಕರ ನಾನು ಎಂದು ತಿಳಿದು ಜನರ ಕಷ್ಟಕ್ಕೆ ಸ್ಪಂದಿಸ ಬೇಕಾದದ್ದು ಶಾಸಕರ ಕೆಲಸ, ಇದರಿಂದ ಸರಕಾರಕ್ಕೆ ಮುಜುಗರ ವಾಗಬಹುದು ಎಂಬ ಕಾರಣಕ್ಕೆ ಜನಸ್ಪಂದನೆ ಇಲ್ಲ ದಿದ್ದರೆ ಶಾಸಕರಾಗಿಯೂ ಏನೂ ಪ್ರಯೋಜನ ವಿಲ್ಲದೇ ಹೋಗಬಹುದು, ಜನರೊಂದಿಗೆ ಇರುವ ಶಾಸಕರು ಯಾವ ಸರಕಾರ ಇದ್ದರೂ ಸಮಸ್ಯೆಗಳು ಬಂದಾಗ ಜನರೊಂದಿಗೆ ಇದ್ಫು ಜನಪ್ರಿಯ ರಾಗುತ್ತಾರೆ ಎನ್ನುವುದಕ್ಕೆ ಇಂದಿನ ಸಚಿವ ಸಂಪುಟದಲ್ಲಿ ಸ್ಥಾನ ಪಡೆದವರೇ ಸಾಕ್ಸಿ ಎಂಬ ಮಾತುಗಳು ಜಗಜಾಹೀರವಾಗುತ್ತಿವೆ.
ಕೇವಲ ತಾನು ತನ್ನವರು ಬೆಳೆದರೆ ಸಾಕು ಎನ್ನುವ ದೋರಣೆ ಇದ್ದವರಿಗೆ ಇಂದಿನ ಸರಕಾರದ ಮಟ್ಟದಲ್ಲಿ ಇಂದಿನ ಸರಕಾರ ಸರಿಯಾದ ಬೆಲೆ ನೀಡಿದೆ ಎಂಬ ಮಾತುಗಳು ಕೇಳಿ ಬಂದಿವೆ, ಆದರೆ ನಮ್ಮ ಜಿಲ್ಲೆಯ ಸ್ಥಿತಿ ಯಾವ ಜಿಲ್ಲೆಗೂ ಬರಬಾರದು, ಜಿಲ್ಲೆಯ ಜನ ಎಲ್ಲವನ್ನೂ ತ್ಯಾಗ ಮಾಡಿ ಈಗ ಬೇರೆ ಜಿಲ್ಲೆಯ ಮಂತ್ರಿಗಳು, ನಮಗೆ ಉಸ್ತುವಾರಿ ಯಾಗುವ ಭಾಗ್ಯ ಬಂದಿದೆ, ಹೀಗೆ ಆದರೆ ಮುಂದಿನ ಕೆಲ ವರ್ಷ ಗಳಲ್ಲಿ ಸರಕಾರದ ಹಲವಾರು ಯೋಜನೆಗಳು ಜಿಲ್ಲೆಗೆ ಬಂದು, ಜಿಲ್ಲೆಯ ಹೆಸರೇ ಇಲ್ಲದಂತೆ ಆದರೂ ಆಶ್ಚರ್ಯವಿಲ್ಲ. ಸರಕಾರ ಈಗಾಗಲೇ ಹಲವು ಯೋಜನೆ ಗಳನ್ನು ಜಿಲ್ಲೆಯ ಜನರ ಮೇಲೆ ಹೇರಿದೆ, ಇದಕ್ಕೆಲ್ಲ ಯಾವ ಶಾಸಕರೂ ಮಾತಾಡುತ್ತಿಲ್ಲ, ಇದಕ್ಕೇನಾ ಇವರನ್ನು ಆಯ್ಕೆ ಮಾಡಿದ್ದು ಎಂಬ ದೊಡ್ಡ ದ್ವನಿ ಕೇಳಿ ಬಂದಿದೆ.
