ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ತಾಲೂಕಾ ಕೇಂದ್ರದ ಶಿವಾಜಿ ಸರ್ಕಲ್ ದಲ್ಲಿ ಬರುವ ದಿನಾಂಕ 14ರ ಮಂಗಳವಾರ ದಂದು, ಸಂವಿಧಾನ ಶಿಲ್ಪಿ ಡಾ, ಬಿ ಆರ್ ಅಂಬೇಡ್ಕರ ರ 135ನೆಯ ಜಯಂತಿ ಯನ್ನು ಆಚರಿಸಲು ಅಭಿಮಾನಿ ಬಳಗವು ನಿರ್ಧರಿಸಿದೆ.
ದಿನಾಂಕ 14 ರಂದು ಬೆಳಿಗ್ಗೆ ಭಾವಚಿತ್ರ ಕ್ಕೆ ಪೂಜೆ ಮದ್ಯಾಹ್ನ 3 ಘಂಟೆಗೆ ವೇದಿಕೆಯ ಕಾರ್ಯಕ್ರಮ ನಂತರ 4ಘಂಟೆಗೆ ಮೆರವಣಿಗೆ ಕಾರ್ಯಕ್ರಮ ಕೂಡ ಹಮ್ಮಿಕೊಂಡಿರುತ್ತಾರೆ, ಸರ್ವರಿಗೂ ಆದರದ ಸ್ವಾಗತ ನೀವೂ ಬನ್ನಿ ನಿಮ್ಮವರನ್ನೂ ಕರೆ ತನ್ನಿ ಎಂದು ಜನತೆಯನ್ನು ಆಮಂತ್ರಿಸಿದ್ದಾರೆ ಅಜ್ಞಾನ ನಿಮ್ಮಲ್ಲಿ ಭಯವನ್ನು ಉಂಟು ಮಾಡಿದರೆ, ಭಯ ನಿಮ್ಮಲ್ಲಿ ಅಜ್ಞಾನ ವನ್ನು ಉಂಟು ಮಾಡುತ್ತದೆ
ಈ ಎರಡನ್ನೂ ಓಡಿಸಲು ವಿದ್ಯೇ ಯೇ ಏಕೈಕ ಅಸ್ತ್ರ ಎಂಬ ಸ್ಲೋಗನ್ ಈ ಕರೆಯೋಲೆ ಜೊತೆ ಇರುವುದು ಜನರ ಆಕರ್ಷಣೆ ಗೆ ಕಾರಣ ವಾಗಿದೆ. ಜೋಯಿಡಾ ದ ಶ್ರೀಕಾಂತ ಕಾಂಬ್ಳೆ ನೇತೃತ್ವದಲ್ಲಿ ಕಾರ್ಯಕ್ರಮ ದ ಸಿದ್ಧತೆ ನಡೆದಿದೆ.
