ಸುದ್ದಿ ಕನ್ನಡ ವಾರ್ತೆ

ಶಿರಸಿ:ನಗರದ ಜನಪ್ರಿಯ ‘ಸತ್ಕಾರ’ ಹೋಟೆಲ್ ಮಾಲೀಕರಾದ ಶ್ರೀ ವಾಸುದೇವ (ಕಿರಣ್) ನಾಯಕ ಅವರ ಅಕಾಲಿಕ ನಿಧನದ ವಾರ್ತೆ ಕೇಳಿ ತೀವ್ರ ಆಘಾತವಾಯಿತು.

​ತಮ್ಮ ಕಠಿಣ ಪರಿಶ್ರಮ ಹಾಗೂ ಆತ್ಮೀಯ ಅತಿಥಿ ಸತ್ಕಾರದ ಮೂಲಕ ‘ಸತ್ಕಾರ’ ಹೋಟೆಲ್ ಅನ್ನು ಕೇವಲ ಒಂದು ಉದ್ಯಮವಾಗಿ ಮಾತ್ರವಲ್ಲದೆ, ಉತ್ತರ ಕನ್ನಡದ ಒಂದು ಸ್ವಾದಿಷ್ಟ ಪರಂಪರೆಯಾಗಿ ಬೆಳೆಸಿದವರು ಅವರು. ಅವರ ಸಜ್ಜನಿಕೆ ಮತ್ತು ವೃತ್ತಿಪರತೆ ಎಲ್ಲರಿಗೂ ಮಾದರಿಯಾಗಿತ್ತು.
​ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಹಿತೈಷಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿರುತ್ತಾರೆ.

​ವಿಶ್ವೇಶ್ವರ ಹೆಗಡೆ ಕಾಗೇರಿ
ಸಂಸದರು, ಉತ್ತರ ಕನ್ನಡ.