ಸುದ್ದಿ ಕನ್ನಡ ವಾರ್ತೆ

​ಶಿರಸಿಯ ಜನಪ್ರಿಯ ಸಮಾಜ ಸೇವಕರು ಹಾಗೂ ನಗರಸಭೆಯ ಮಾಜಿ ಸದಸ್ಯರಾದ ಶ್ರೀ ರಾಜಪ್ಪ ಜೋಗಳೇಕರ್ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ  ಶೋಕ ವ್ಯಕ್ತಪಡಿಸಿದ್ದಾರೆ.

​ಶಿರಸಿಯ ಬಾಪೂಜಿನಗರದ ನಿವಾಸಿಯಾಗಿದ್ದ ಶ್ರೀ ರಾಜಪ್ಪ ಜೋಗಳೇಕರ್ ಅವರು ಶಿಸ್ತುಬದ್ಧ ರಾಜಕಾರಣ ಮತ್ತು ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಮನೆಮಾತಾಗಿದ್ದವರು. ಸದಾ ಸಾರ್ವಜನಿಕರ ಹಿತವನ್ನೇ ಬಯಸುತ್ತಿದ್ದ ಅವರು, ಶಿರಸಿಯ ಸಾಮಾಜಿಕ ಹಾಗೂ ರಾಜಕೀಯ ಏಳಿಗೆಗಾಗಿ ಶ್ರಮಿಸಿದ ಸಜ್ಜನ ವ್ಯಕ್ತಿತ್ವದವರು.
ಅನೇಕ ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದ ಇವರ ಅಗಲಿಕೆಯು ಶಿರಸಿಯ ನಗರದ ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ.

​ಲೋಕ ಧ್ವನಿ ಪತ್ರಿಕೆಯ ಮುಖ್ಯ ವರದಿಗಾರರು ಹಾಗೂ ‘ರಾಜ್ ಬಿಗ್ ಬ್ರೇಕಿಂಗ್’ ಸಂಪಾದಕರಾದ ಶ್ರೀ ಜೆ.ಆರ್. ಸಂತೋಷ್ ಕುಮಾರ್ ಸೇರಿದಂತೆ ಅವರ ಕುಟುಂಬದವರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ.
​ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸುತ್ತಾ, ಅವರಿಗೆ ಭಕ್ತಿಪೂರ್ವಕ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇನೆ ಎಂದು ಸಂಸದ ಕಾಗೇರಿ ನುಡಿದಿದ್ದಾರೆ.