ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಅರಣ್ಯ ಸಂರಕ್ಷಣೆ ಯಲ್ಲಿ ಸಮುದಾಯದ ಪಾತ್ರ ತುಂಬಾ ಮುಖ್ಯ ವಾಗಿದೆ, ಅರಣ್ಯ ಉಳಿದರೆ ಮಾತ್ರ ನಾವು ಎಂದು ಶಾಸಕರು, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಆಗಿರುವ ಆರ್ ವಿ ದೇಶಪಾಂಡೆ ಅವರು ಹೇಳಿದರು, ಅವರು ಗ್ರಾಮ ಅರಣ್ಯ ಸಮೀತಿ ಜಗಲ್ಬೇಟ್ ದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿ ಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದೆ ನನ್ನ ಕ್ಷೆತ್ರಕ್ಕೆಈ ಭಾಗ ಸೇರಿದ ಮೊದಲ ಸಲ ನಾನು ಶಾಸಕ ನಾಗಿ ಬಂದಾಗ ಇಲ್ಲಿ ಗ್ರಾಮ ಅರಣ್ಯ ಸಮೀತಿ ಗಳು ಸ್ಥಾಪನೆ ಯಾಗಿದ್ದವು, ಈ ಸಮೀತಿ ಸದಸ್ಯರುಗಳು ಅರಣ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ಮೆಚ್ಚುವಂತಹದು, ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುತ್ತಿದ್ದಾರೆ, ಇಲಾಖೆ ಉತ್ತಮ ಕೆಲಸ ಮಾಡುತ್ತಿದ್ದು ಜನತೆ ಇಲಾಖೆಯ ಪ್ರಯೋಜನ ಪಡೆದು ಕೊಳ್ಳಲು ಕರೆ ನೀಡಿದರು. ಹಳಿಯಾಳ ಪ್ರಾದೇಶಿಕ ವಿಭಾಗದ ಜಗಲ್ಬೇಟ್ ವಲಯದ ಗ್ರಾಮ ಅರಣ್ಯ ಸಮಿತಿ ಗಳ ಅಡಿಯಲ್ಲಿ ನಿರ್ಮಿಸಿದ ವಿವಿಧ ಕಟ್ಟಡ ಗಳ ಉದ್ಘಾಟನೆ ಮಾಡಲಾಯಿತು, ವಿವಿಧ ಪಲಾನುಭವಿ ಗಳಿಗೆ ಸಾಮಗ್ರಿಗಳು, ಕಿಟ್ ಗಳು ಚೆಕ್ ಗಳನ್ನು ವಿತರಿಸಲಾಯಿತು, ಇಳೆಧಾಬೆ, ಕಾಮ್ರಾ,ಗೌಳಿವಾಡ, ಮಾಲಂಬಾ, ಅಮಸೆತಗೌಳಿವಾಡ, ಸಿಂದೊಲಿ, ಚಾಪಾಳಿ, ಜನತೆಗೆ ಸಾಮಗ್ರಿ, ಕರಡಿಧಾಳಿ ವ್ಯಕ್ತಿಗೆ ಚೆಕ್ ವಿತರಿಸಿ, ಅರಣ್ಯ ಇಲಾಖೆಯ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದ್ದು ಗ್ರಾಮ ಅರಣ್ಯ ಸಮೀತಿ ಸದಸ್ಯರು ಗಳಿಗೆ ಸನ್ಮಾನಿಸಿದ್ದು ಕೂಡಿದ ಜನತೆಗೆ ಸಂತಸ ತಂದಿದೆ. ಈ ಸಂದರ್ಭದಲ್ಲಿ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ್ ಕೆ ಸಿ, ಎ ಸಿ ಎಫ್ ಮಹಮ್ಮದ್ ಶಫಿ, ಜಗಲ್ಬೇಟ್ ವಲಯ ಅರಣ್ಯಆಧಿಕಾರಿ ವಿನಯ್ ಭಟ್, ಇತರ ಗಣ್ಯರು ಉಪಸ್ಥಿತರಿದ್ದರು, ಕಾರ್ಯಕ್ರಮ ವನ್ನು ಅಚ್ಚು ಕಟ್ಟಾಗಿ ಸಂಘಟಿಸಿದ್ದ ವಲಯ ಅರಣ್ಯಅಧಿಕಾರಿ ವಿನಯ್ ಭಟ್ ಮೆಚ್ಚುಗೆ ಗಳಿಸಿದರು.
