ಸುದ್ದಿ ಕನ್ನಡ ವಾರ್ತೆ
ಹಳಿಯಾಳ :ತಾಲೂಕಿನ ಸತತವಾಗಿ 7ನೇ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆನರಾ ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರಾಗಿ ಆಯ್ಕೆಗೊಂಡ ಜಿಲ್ಲೆಯ ಮಾಜಿ ವಿ.ಪ ಸದಸ್ಯರು, ಬಿಜೆಪಿ ನಾಯಕರಾದ ಎಸ್.ಎಲ್.ಘೋಟ್ನೇಕರ ಅವರನ್ನು ಅವರ ಸ್ವಗೃಹದಲ್ಲಿ ತಾಲೂಕಿನ ಮಾರ್ಕೆಟಿಂಗ್ ಸೊಸೈಟಿಯ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಭೇಟಿಯಾಗಿ ಸನ್ಮಾನಿಸಿ, ಶುಭ ಹಾರೈಸಿದರು.
ಈ ವೇಳೆ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರು, ಬಿಜೆಪಿ ಯುವ ನಾಯಕರಾದ ಶ್ರೀನಿವಾಸ ಘೋಟ್ನೇಕರ, ನಿರ್ದೇಶಕರಾದ ವಿಜಯ ಬೋಬಾಟಿ, ನಾಗರಾಜ ಪಾಟೀಲ, ಮೇಘನಾಥ ಪಾಟೀಲ್, ಪ್ರಕಾಶ ಕೊರವರ, ಜುಜೆ ಹಂಚಿನಮಣಿ, ಜ್ಯೋತಿ ಗರಗ, ನಿರ್ಮಲಾ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
