ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದಲ್ಲಿ ತಾಲೂಕಾ ಆಡಳಿತ ಸತ್ತು ಹೋಗಿದೆಯೇ, ಅವರನ್ನು ಸರಿ ಮಾಡಲು ಉತ್ತರ ಕರ್ನಾಟಕ ದಿಂದ ನಾವು ಬರಬೇಕಾ, ಕಳೆದ ಒಂದು ವರ್ಷ ದಿಂದ ನೋಡುತ್ತಿದ್ದೇವೆ, ಇದೇ ಕಥೆ, ಈ ಸೇತುವೆ ನಮ್ಮ ಉಳವಿ ಶ್ರೀ ಚನ್ನ ಬಸವಣ್ಣನ ಪುಣ್ಯ ಕ್ಷೆತ್ರದ ದಾರಿಯಲ್ಲಿದೆ.

ಈ ಸೇತುವೆ ಕಳೆದ 3 ತಿಂಗಳ ಹಿಂದೆಯೇ ಮುಗಿದಿದೆ, ಈ ಸೇತುವೆ ಕಟ್ಟಿದ ನಂತರ ಕಟ್ಟಿದ ಪಣಸೋಲಿ ಸೇತುವೆ ಮೇಲಿಂದ ವಾಹನ ಓಡಾಡುತ್ತದೆ, ಇಲ್ಲಿ ಜನರನ್ನು ಸತಾಯಿಸುವ ಕಾರಣ ಏನು, ಇಲ್ಲಿ ಆಗುವ ದುರಂತಕ್ಕೆ ತಾಲೂಕಾ ಆಡಳಿತ ಜವಾಬ್ದಾರಿ ಹೊರುತ್ತದೆಯೇ,? ಜನರ ಜೀವದ ಜೊತೆಗೆ ಚಲ್ಲಾಟ ಆಡಲು ಯಾರಿಗೂ ಅಧಿಕಾರ ಇಲ್ಲ, ಕೂಡಲೇ ಸೇತುವೆ ಮೇಲಿಂದ ವಾಹನ ಓಡಾಡಲು ಅನುಕೂಲ ಮಾಡಿ ಕೊಡಿ, ಇಲ್ಲ ವೆಂದಾದರೆ, ಬೆಳಗಾವಿ, ಬೈಲಹೊಂಗಲ, ಧಾರವಾಡ ದಿಂದ ನಾವು ತಾಲೂಕಾ ಆಡಳಿತದ ಮುಂದೆ ಬರ್ತೀವಿ ಎಂದು ಘರ್ಜನೆ ಹಾಕಿದವರು ಉಳವಿ ಬಸವಣ್ಣನ ಭಕ್ತರು. ಶ್ರೀ ಕ್ಷೆತ್ರ ಉಳವಿಗೆ ದೇವರ ದರ್ಶನಕ್ಕೆ ಬಂದ ಭಕ್ತರು ಕೈಟಾ ನಾಲಾ ಸೇತುವೆ ಕೆಲಸ ಮುಗಿದರೂ ಗುತ್ತಿಗೆ ದಾರ ಸ್ವಲ್ಪ ಕೆಲಸ ಬಾಕಿ ಇಟ್ಟು ಕೊಂಡು ಶ್ರೀ ಕ್ಷೆತ್ರದ ಜನತೆಗೆ ತೊಂದರೆ ಕೊಡುತ್ತಿರುವುದು ಸರಿ ಅಲ್ಲ .

ದೂರ ದೂರ ದಿಂದ ಬರುವ ನಮಗೆ ಆಗುವ ತೊಂದರೆಗೆ ಯಾರು ಹೊಣೆ, ಬಸ್ಸು ಕೆಸರಲ್ಲಿ ಸಿಕ್ಕಿ ಕೊಂಡಿದೆ ಸರಳ ಓಡಾಟಕ್ಕೆ ರಸ್ತೆ ಸರಿಪಡಿಸಬೇಕು ಇದೆಲ್ಲಾ ಗೊತ್ತಿದ್ದೂ ತಾಲೂಕಾ ಆಡಳಿತ ಕಂಡೂ ಕಾಣದಂತೆ ಇರುವುದು ಸರಿ ಅಲ್ಲ, ಜನರ ಕಷ್ಟಕ್ಕೆ ಸ್ಪಂದಿಸಲು ತಾಲೂಕಾ ಆಡಳಿತ ಕ್ಕೆ ಸರಕಾರದ ಸಾಕಷ್ಟು ಅನುದಾನ ವಿರುತ್ತದೆ, ಹೀಗಿದ್ದೂ ಇಲ್ಲಿ ಜನತೆಗೆ ಸಾಕಷ್ಟು ತೊಂದರೆ ಯಾಗಿದೆ, ಅದನ್ನು ಪರಿಹರಿಸಲು ಪ್ರಯತ್ನಿಸದೆ ಇದ್ದಿದ್ದು ತಪ್ಪು, ನಂದಿಗದ್ದೆ ಗ್ರಾಮ ಪಂಚಾಯತ ಆಡಳಿತಾಧಿಕಾರಿ,ಮತ್ತು ಅಭಿವೃದ್ಧಿ ಅಧಿಕಾರಿ ಗಳ ನಿರ್ಲಕ್ಷ ದ ಪರಿಣಾಮ ಈ ಸ್ಥಿತಿಗೆ ಬಂದಿದೆ ಎಂದು ಪ್ರಯಾಣಿಕರು ದೂರಿದ್ದಾರೆ, ಜನರ ಜೀವದ ಜೊತೆಗೆ ಚಲ್ಲಾಟ ಆಡುವವ ರಿಗೆ ಬುದ್ದಿ ಹೇಳಲು ನಾವು ಉತ್ತರ ಕರ್ನಾಟಕ ದಿಂದ ನಮ್ಮ ತಂಡ ದೊಂದಿಗೆ ಬರುವಂತೆ ಮಾಡಬೇಡಿ ಎನ್ನುವ ಮೂಲಕ ಸಂಬಂದಿಸಿದ ಅಧಿಕಾರಿಗಳಿಗೆ, ಸಂಕಷ್ಟಕ್ಕೆ ಸಿಕ್ಕ ಪ್ರಯಾಣಿಕರು ಎಚ್ಚರಿಕೆ ನೀಡಿದ್ದಾರೆ.

 

ಕೈಟಾ ನಾಲಾ ಸೇತುವೆ ಪಕ್ಕ ನಿರ್ಮಿಸಿದ ಬದಲಿ ರಸ್ತೆ ಯಲ್ಲಿ ವಾಹನ ಗಳು ಮಳೆಗಾಲದಲ್ಲಿ ಓಡಾಡುವುದೇ ಕಷ್ಟ ಕರ ವಾಗಿದೆ, ಇಲ್ಲಿ ಸಾರಿಗೆ ಬಸ್ ಸಿಲುಕಿದ ಕಾರಣ ಉಳವಿಗೆ ಬಂದ ಭಕ್ತರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.