ಸುದ್ದಿ ಕನ್ನಡ ವಾರ್ತೆ

ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ ಎಂದು ಉತಾರೆಯಲ್ಲಿ ನಮೂದಾಗಿದೆ.

ಸರ್ವೆ ನಂ. 64 ರಲ್ಲಿಯ 1 ಎಕರೆ 39 ಗುಂಟೆ ಜಾಗೆಯು 13.10. 2020 ರಲ್ಲಿ ಖಬರಸ್ತಾನ ಸುನ್ನಿ ವಕ್ಪ ಹೆಸರಿನಲ್ಲಿ ನಮೂದಾಗಿದೆ.

ಈ ಮೊದಲು ಸಣ್ಣವ್ವ ಕೋಲಾರ ಎಂಬುವವರು ಸರ್ಕಾರಕ್ಕೆ ಜಾಗೆಯನ್ನು ನೀಡಿದರನ್ವಯ 1.39 ಎಕರೆ ಮಸಣವಾಟ(ಸ್ಮಶಾನ) ಹಲವಾರು ವರ್ಷಗಳಿಂದ ರುದ್ರಭೂಮಿಯಾಗಕ ಬಳಕೆಯಾಗುತ್ತಿದೆ. 2013 ರಲ್ಲಿ ಇದೇ ಜಾಗೆಯ ಮೇಲೆ ಜಮಖಂಡಿಯ ಭಾರತೀಯ ಸ್ಟೇಟ್ ಬ್ಯಾಂಕ್ ರೂ. 3 ಲಕ್ಷವನ್ನು ಸಾಲವನ್ನು ನೀಡಿದೆ. ಇದು ಕೂಡಾ ಉತಾರೆಯಲ್ಲಿ ನಮೂದಾಗಿದೆ.

ಸ್ಮಶಾನದ ಮೇಲೂ ಕಣ್ಣು: ವಕ್ಪ್ ಭೂತ ರಬಕವಿ ಬನಹಟ್ಟಿ ತಾಲ್ಲೂಕನ್ನು ಆವರಿಸಿಕೊಂಡಿದೆ. ಈಗ ಹೊಸೂರಿನ ಸ್ಮಶಾನದ ಮೇಲೂ ಬಿದ್ದಿದೆ. ರೈತರ ಒಡೆತನದಲ್ಲಿರುವ ಭೂಮಿಗೆ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ಅದು ನಮ್ಮ ವಶದಲ್ಲಿತ್ತು ಎಂದು ತಕರಾರು ತೆಗೆಯುತ್ತಿದ್ದಾರೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಆರೋಪಿಸಿದ್ದಾರೆ.

ಆದ್ದರಿಂದ ರಬಕವಿ, ಬನಹಟ್ಟಿ ಮತ್ತು ತೇರದಾಳಕ್ಕೆ ಸೇರಿದ ಎಲ್ಲ ರೈತರೂ ಕೂಡಲೇ ಎಚ್ಚೆತ್ತುಕೊಂಡು ತಾಲ್ಲೂಕು ಕಾರ್ಯಾಲಯಕ್ಕೆ ತೆರಳಿ ತಮ್ಮ ಭೂ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಶಾಸಕ ಸವದಿ ತಿಳಿಸಿದರು.