ಸುದ್ಧಿಕನ್ನಡ ವಾರ್ತೆ
Goa: ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 354 ನೇಯ ಆರಾಧನಾ ಮಹೋತ್ಸವ ಅಗಷ್ಟ 10 ರಿಂದ 12 ರ ವರೆಗೆ ಜರುಗುತ್ತಿದೆ.ಈ ಆರಾಧನಾ ಮಹೋತ್ಸವದ ಅಂಗವಾಗಿ ಗೋವಾದ ಮಡಗಾಂವ ಮೋತಿ ಡೊಂಗರ್ ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ.

ಅಗಷ್ಟ 9 ರಂದು ಶನಿವಾರ ಸಂಜೆ 7.30 ಕ್ಕೆ ಧ್ವಜಾರೋಹಣ ಧಾನ್ಯ ಮತ್ತು ಶ್ರೀ ಲಕ್ಷ್ಮೀ ಪೂಜೆ, 8.30 ಕ್ಕೆ ಸ್ವಸ್ತಿ ಪುಣ್ಯಾಹವಾಚನ ಮತ್ತು ಮಹಾಮಂಗಳಾರತಿ ಕಾರ್ಯಕ್ರಮ ನೆರವೇರಿಸಲಾಯಿತು. ಅಗಷ್ಟ 10 ರಂದು ಭಾನುವಾರ ಬೆಳಿಗ್ಗೆ ಪೂರ್ವ ಆರಾಧನೆ ಕಾರ್ಯಕ್ರಮದಲ್ಲಿ ಆರತಿ ನಾಯಕ್ ಕಾಮತ್ ರವರಿಂದ ಬೆಳಿಗ್ಗೆ 11.30 ರಿಂದ ಭಜನಾ ಕಾರ್ಯಕ್ರಮ ಜರುಗಿತು.

ಅಗಷ್ಟ 11 ರಂದು ಸೋಮವಾರ ಮಧ್ಯ ಆರಾಧನೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವಿಠ್ಠಲ್ ಭಜನ್ ರವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಗೋವಾ ರಾಜ್ಯದ ಮೂಲು ಮೂಲೆಯಿಂದ, ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ಮುಂಬಯಿ ಭಾಗದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿರಾಯರ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿದರು. ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಆಗಮಿಸಿ ರಾಯರ ದರ್ಶನ ಪಡೆದುಕೊಂಡರು.

 

ಅಗಷ್ಟ 12 ರಂದು ಮಂಗಳವಾರ ಉತ್ತರ ಆರಾಧನೆ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ಗಂಟೆಗೆ ಶ್ರೀ ಪ್ರಹ್ಲಾದ ಮಹಾರಾಜರ ರಥೋತ್ಸವ ಮೆರವಣಿಗೆ ನಡೆಯಲಿದೆ. 6 ಗಂಟೆಗೆ ಸುಪ್ರಭಾತಂ ಮತ್ತು ನಿರ್ಮಾಲ್ಯ ವಿಸರ್ಜನ, 7.30 ರಿಂದ ಅಷ್ಟೋತ್ತರ ಸ್ತೋತ್ರ ಪಾರಾಯಣ ಮತ್ತು ಪಂಚಾಮೃತ ಅಭಿಷೇಕ. 9 ಗಂಟೆಗೆ ಉತ್ಸವ ರಾಯರ ಪಾದಪೂಜೆ, ಮಧ್ಯಾನ್ಹ 1 ಗಂಟೆಗೆ ಮಹಾನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ. ಸಂಜೆ 7.30 ಕ್ಕೆ ಪಲ್ಲಕ್ಕಿ ಸೇವೆ, ರಥೋತ್ಸವ, ಸ್ವಸ್ತಿ ವಾಚನ, ಮಹಾಮಂಗಳಾರತಿ, ತೀರ್ಥಪ್ರಸಾದ ಕಾರ್ಯಕ್ರಮ ಜರುಗಲಿದೆ ಎಂದು ಗೋವಾ ಮಡಗಾಂವ ಮೋತಿ ಡೊಂಗರ್ ರಾಯರ ಮಠದಿಂದ ಮಾಹಿತಿ ನೀಡಲಾಗಿದೆ.