ಸುದ್ದಿ ಕನ್ನಡ ವಾರ್ತೆ

ಮಾನ್ಯ ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ), ಮಂಗಳೂರು ವಿಭಾಗ, ಮಂಗಳೂರು ರವರ ನಿರ್ದೇಶನ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ . ಕಾರವಾರ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಯಲ್ಲಾಪುರ ರವರ ಮಾರ್ಗದರ್ಶನದಲ್ಲಿ ದಿನಾಂಕ : 15/12/2025 ರಂದು ಮಧ್ಯಾನ 1.45 ಗಂಟೆ ಸಮಯದಲ್ಲಿ ಶ್ರೀ ಟಿ.ಬಿ.ಮಲ್ಲಣ್ಣವರ ಅಬಕಾರಿ ಉಪ ನಿರೀಕ್ಷಕರು ತನಿಖಾ ಠಾಣೆ ಅನಮೋಡ ಹಾಗೂ ಸಿಬ್ಬಂದಿಗಳಾದ ಸಂತೋಷ ಸುಬ್ಬಣ್ಣನವರ, ವಿಕ್ರಮ ಬಿಡಿಕರ್, ಈರಣ್ಣ ಗಾಳಿ ಮತ್ತು ಎಂ. ಏಚ್.ಆನವಟ್ಟಿ ರವರು ಅನ್ಮೋಡ ತನಿಖಾ ಠಾಣೆ ಯಲ್ಲಿ ಅಬಕಾರಿ ಅಕ್ರಮಗಳ ಪತ್ತೆಗಾಗಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿರುವಾಗ ಬಂದ ಖಚಿತ ಬಾತ್ಮಿ ಮೇರೆಗೆ ಒಂದು ಈಚರ ಕಂಪೆನಿಯ ಪ್ರೊ 2095 ಮಿನಿ ಲಾರಿ ವಾಹನವು ಗೋವಾ ದಿಂದ ರಾಮನಗರದ ಕಡೆಗೆ ಬರುವುದು ಕಂಡುಬಂದಿದ್ದು, ಸದರಿ ವಾಹನವನ್ನು ತನಿಖಾ ಠಾಣೆ ಬದಿ ನಿಲ್ಲಿಸಿ ವಾಹನವನ್ನು ತಪಾಸಣೆ ನಡೆಸಿದಾಗ 18.78 ಮಿ.ಲಿಯ ಗೋವಾ ರಾಜ್ಯದ ಮದ್ಯ ಪತ್ತೆಯಾಗಿದ್ದು ದೊರೆತ ಮದ್ಯ ಹಾಗೂ ಒಂದು ಮಿನಿ ಲಾರಿ ವಾಹನವನ್ನು ಜಪ್ತುಪಡಿಸಿಕೊಂಡು ಅಬಕಾರಿ ಉಪ ನಿರೀಕ್ಷಕರು ದಾಂಡೇಲಿ ವಲಯ ರವರಿಗೆ ಮುದ್ದೆಮಾಲು, ಒಂದು ಮಿನಿ ಲಾರಿ ವಾಹನ ಹಾಗೂ ಆರೋಪಿಯನ್ನು ಹಸ್ತಾಂತರಿಸಲಾಯಿತು.