ಸುದ್ದಿ ಕನ್ನಡ ವಾರ್ತೆ
ಬೆಳಗಾವಿ
ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಗುರುಬಸವ ಬಳಗ ಮತ್ತು ತಾಲೂಕು ಜಾಗತಿಕ ಲಿಂಗಾಯತ ಮಹಾಸಭೆ ಇವರ ಸಹಯೋಗದಲ್ಲಿ ಪ್ರತಿ ತಿಂಗಳಂತೆ ಈ ತಿಂಗಳು ಸಹ 3ನೆಯ ರವಿವಾರದಂದು ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯಿತು.
ಇದು 19ನೆಯ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮವಾಗಿದ್ದು ಶ್ರೀ ನಿಜಗುಣ ಶಿವಯೋಗಿಗಳ ಶ್ರೀ ಮಠದಲ್ಲಿ ಆಯೋಜಿಸಲಾಗಿತ್ತು.ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು.ಶರಣರಾದ ಶ್ರೀ ಮಹಾಂತೇಶ ತೋರಣಗಟ್ಟಿ ಗುರುಗಳು,ಜಿಲ್ಲಾ ಸಂಚಾಲಕರು ಸಂಚಾರಿ ಗುರುಬಸವ ಬಳಗ ಬೆಳಗಾವಿ ಇವರು ನೆರವೇರಿಸಿಕೊಟ್ಟರು, ಈ ಶಿವಯೋಗ ಕಾರ್ಯಕ್ರಮಕ್ಕೆ ಧಾರವಾಡ ತಪೋವನದ ಕುಮಾರಸ್ವಾಮಿಗಳ ಶಿಷ್ಯರಾದ ಶರಣ ಶ್ರೀ ಸತೀಶ ಸವದಿ ಯವರು ಆಗಮಿಸಿ ಇಷ್ಟಲಿಂಗ ಪೂಜಾ ಹಾಗೂ ಶಿವಯೋಗದಿಂದ ಶರೀರ ಮತ್ತು ಮನಸ್ಸಿನ ಮೇಲೆ ಆಗುವ ಪರಿಣಾಮಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿಸುತ್ತಾ ಶಿವಯೋಗ ಒಂದು ಪರಿಪೂರ್ಣ ಯೋಗ, ಇದರಿಂದ ಪಂಚೇಂದ್ರಿಯಗಳನ್ನು ನಿಗ್ರಹಿಸುತ್ತಾ ಗ್ರಹಸ್ಥರು ಕೂಡ ಲಿಂಗಾಯೋಗದ ಸಾಮರಸ್ಯವನ್ನು ಅರಿತುಕೊಂಡು ಕುಂಡಲಿನಿ ಶಕ್ತಿಗಳನ್ನ ಜಾಗೃತಿಗೊಳಿಸಿಕೊಂಡು ಅಂತರಾತ್ಮ ಶುದ್ಧೀಕರಣಗೊಳಿಸಿಕೊಂಡು ಅರಿವಿನಡಿಗೆ ನಡೆಯುವುದೇ ಶಿವಯೋಗ ಎಂದರು ಜೊತೆಗೆ ಅಲ್ಲಮ ಪ್ರಭುಗಳ ಕಾಲಜ್ಞಾನ ವಚನಗಳ ಕುರಿತಾಗಿ ಮಾಹಿತಿ ನೀಡಿದರು.
ಶರಣರಾದ ಚಂದ್ರಶೇಖರ ಹುಬ್ಬಳ್ಳಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಶರಣರಾದ ಪ್ರವೀಣ ರೊಟ್ಟಿ ಸ್ವಾಗತಿಸಿದರು ಶರಣರಾದ ಬಿ.ಜಿ.ವಾಲಿಇಟಗಿ ಶರಣು ಸಮರ್ಪಿಸಿದರು.ಶರಣ ಶ್ರೀ ಸತೀಶ ಸವದಿ ಅವರನ್ನು ಬಳಗದ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಪಿ.ಉಪ್ಪಿನ,ಆನಂದ ಕೊಂಡಗುರಿ,ದಯಾನಂದ ಹಂಚಿನಮನಿ,ಶಿವಪುತ್ರ ಇಟಗಿ, ಅಶೋಕ ಪಾಚ್ಚಾಪುರ, ನಾಗನಗೌಡ ಹಾದಿಮನಿ,ಶ್ರೀಕಾಂತ್ ಪಡಗಲ್,ಬಸನಗೌಡ ಹಾದಿಮನಿ ಹಾಗೂ ಗುರುಬಸವ ಬಳಗ ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯ ಸದಸ್ಯರು ಅಕ್ಕನ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.