ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾದ ಸದಾಶಿವಗಡ- ಔರಾದ ರಾಜ್ಯ ಹೆದ್ದಾರಿಯ ನುಜ್ಜಿ- ಅಣಶಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಪೂರ್ಣ ಕಾಮಗಾರಿಯಿಂದಾಗಿ ಸಣ್ಣ ಮಳೆ ಬಂದರು ಮಳೆನೀರು ರಸ್ತೆಯಲ್ಲೇ ನಿಂತು ರಸ್ತೆಯೋ ಅಥವಾ ಕೆರೆಯೋ ಎಂಬಂತೆ ಕಾಣುತ್ತಿದ್ದು, ಸರಿಪಡಿಸಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ವಾಹನ ಸವಾರರಿಗೆ ಸಂಚಾರಕ್ಕೆ ಸಂಕಟ ವಾಗಿ ಪರಿಣಮಿಸಿದೆ.

​ಕುಂಬಾರವಾಡಾದಿಂದ ಪ್ರಾರಂಭವಾಗಿ ಅಣಶಿ ಬಳಿ ರಸ್ತೆ ಎರಡು ಭಾಗದಲ್ಲಿ ಗಟಾರು ತೆಗೆಯಲಾಗಿದ್ದು, ಗಟಾರು ಮಣ್ಣು ರಸ್ತೆಯಲ್ಲಿ ಹಾಕಲಾಗಿದೆ. ಇದರಿಂದಾಗಿ ರಸ್ತೆಯಲ್ಲಿಯೇ ನೀರು ನಿಲ್ಲುವಂತಾಗಿದ್ದು, ರಸ್ತೆಯಲ್ಲಿ ಎಷ್ಟು ನೀರು ತುಂಬಿಕೊಂಡಿದೆ ಎಂದು ತಿಳಿಯದೆ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
​ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಹರಿಸಿ ಜನರಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಿದೆ.