ಸುದ್ದಿ ಕನ್ನಡ ವಾರ್ತೆ

ಗಣೇಶ್ ಗುಡಿ ಯ ಕೆನರಾ ಬ್ಯಾಂಕ, ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಹಾಗೂ ಟಾಟಾ ಮೋಟರ್ಸ್ ಲಿಮಿಟೆಡ್ ಧಾರವಾಡ ಇವರ ಸಹಯೋಗದೊಂದಿಗೆ ಹೊಲಿಗೆ ತರಬೇತಿ ಸಮಾರೂಪ ಸಮಾರಂಭ ಕಾರ್ಯಕ್ರಮವನ್ನು ಗಣೇಶ್ ಗುಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು .

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದ ಶ್ರೀಮತಿ ಸುನಿತಾ ಟಿ. ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ಮುಖ್ಯ ಅಭಿಯಂತರು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಗಣೇಶ್ ಗುಡಿ ಇವರು. ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸುವ ಮೂಲಕ ಟೈಲರಿಂಗ್ ತರಬೇತಿಯು ಒಂದು ಒಳ್ಳೆಯ ಉದ್ಯೋಗ ಹೀಗೆ ಇದನ್ನು ಮುಂದುವರೆಸಿ ಕೊಂಡು ಹೋಗಿ ಎಂದು ಕರೆ ನೀಡಿದರು . ಲೀನಾ ಪಿಡಿಒ ಅವೇಡ ಗ್ರಾಮ ಪಂಚಾಯತ್ ಇವರು ಶಿರಾರ್ಥಿಗಳಿಗೆ ಜೀವನದಲ್ಲಿ ಸಾಧಿಸುವ ಛಲವಿರಬೇಕು ಮತ್ತು ಟೈಲರಿಂಗ್ ಉದ್ಯೋಗ ಎಷ್ಟು ಮುಖ್ಯ ಅನ್ನುವುದರ ಕುರಿತು ತಮ್ಮ ಕುಟುಂಬದ ವಿವರಣೆ ಕೊಟ್ಟು ಮಾತನಾಡಿದರು ಅರುಣ್ ಬಗವತಿರಾಜ್ ನಿಕಟ ಪೂರ್ವ ಅಧ್ಯಕ್ಷರು ಅವೇಡ ಗ್ರಾಮ ಪಂಚಾಯತ್ ಇವರು ಟೈಲರಿಂಗ್ ಉದ್ಯೋಗ ಆರ್ಥಿಕ ಸಮಸ್ಯೆವನ್ನು ಹೋಗಲಾಡಿಸುವುದಾಗಿದೆ ಎಂದು ಮಾತನಾಡಿದರು ಪ್ರಾಸ್ತಾವಿಕವಾಗಿ ವಿನಾಯಕ್ ಚವಾನ್ ಯೋಜನಾ ಸಂಯೋಜಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಇವರು ಒಂದು ತಿಂಗಳ ತರಬೇತಿ ಮುಗಿಸಿದ್ದೀರಿ ಮುಂದೆ ಇದನ್ನು ಚೆನ್ನಾಗಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗಿ ಎಂದು ಕರೆ ನೀಡಿದರು,

ಕಾರ್ಯಕ್ರಮ ದಅಧ್ಯಕ್ಷರಾದ ಪ್ರಶಾಂತ್ ಬಡ್ಡಿ ನಿರ್ದೇಶಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಇವರು ಕಮ್ಯುನಿಕೇಷನ್ ಸ್ಕಿಲ್, ಟೈಮ್ ಮ್ಯಾನೇಜ್ಮೆಂಟ್, ಸಾವಲಂಬಿ ಜೀವನದ ಕುರಿತು ಮಾತನಾಡಿದರು. ಅಶೋಕ್ ಸೂರ್ಯ ವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಇವರು ಕಾರ್ಯಕ್ರಮವನ್ನು ಆಯೋಜಿಸಿ ವಂದಿಸಿದರು . ಕಾರ್ಯಕ್ರಮದ ಕುರಿತು ಅನಿಸಿಕೆಯನ್ನು ಪೂಜಾ ಮತ್ತು ರಂಜಿತ ಶಿಬಿರಾರ್ಥಿಗಳು ಮಾತನಾಡಿದರು. ವೇದಿಕೆ ಮೇಲೆ ಶರಣಪ್ಪ ಗದ್ದಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತಿ ಅವೇಡ, ಶ್ರೀಮತಿ ದೀಕ್ಷಿತಾ ವೇಲಿಪ್ ಸಂಪನ್ಮೂಲ ವ್ಯಕ್ತಿ ಉಪಸ್ಥಿತರಿದ