ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಬಾಬು ಜಗಜೀವನರಾಮ ಭವನದಲ್ಲಿ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ ಉತ್ತರಕನ್ನಡ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉತ್ತರಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜೋಯಿಡಾ ತಾಲೂಕಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಸಾಧನೆ ಮಾಡಿರುತ್ತಾರೆ.
1ರಿಂದ 7ನೇ ತರಗತಿ ಬಾಲಕರ ವಿಭಾಗದಲ್ಲಿ ನಂದನಕುಮಾರ ಉಪಾಧ್ಯ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂದಿಗದ್ದೆ(ಪ್ರಥಮ), ಚಂದನ ಭಾಗ್ವತ,ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಬಾಪೇಲಿಕ್ರಾಸ್,(ದ್ವಿತೀಯ), ದೇವಾನಂದ ವೇಳಿಪ,ಮೋರಾರ್ಜಿ ದೇಸಾಯಿ ವಸತಿ ಶಾಲೆ ಜೋಯಿಡಾ (ತೃತೀಯ)ಸ್ಥಾನ. 1 ರಿಂದ 7 ನೇ ತರಗತಿ ಬಾಲಕಿಯರ ವಿಭಾಗದಲ್ಲಿ ಅಪೇಕ್ಷಾ ದೇಸಾಯಿ,ಮೋರಾರ್ಜಿ ದೇಸಾಯಿ ವಸತಿ ಶಾಲೆ ಜೋಯಿಡಾ (ಪ್ರಥಮ). ಭೂಮಿಕಾ ಪೂಜಾರಿ,ಟೌನಶಿಪ್ ಶಾಲೆ ಜೋಯಿಡಾ,(ದ್ವಿತೀಯ). ಮರೀಷಾ ಮೈಕಲ್ ಪರ್ನಾಂಡಿಸ್, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂದಿಗದ್ದೆ(ತೃತೀಯ)ಸ್ಥಾನ. 8ರಿಂದ10 ನೇ ತರಗತಿ ಬಾಲಕರ ವಿಭಾಗದಲ್ಲಿ ಬೀರು ಪಾವಣೆ, ಸರಕಾರಿ ಪ್ರೌಢಶಾಲೆ ಬಾಪೇಲಿಕ್ರಾಸ್,(ಪ್ರಥಮ). ವಿನಯ ನೇಗಿನಾಳ,ಮೋರಾರ್ಜಿ ದೇಸಾಯಿ ವಸತಿ ಶಾಲೆ ಜೋಯಿಡಾ.(ದ್ವಿತೀಯ). . ರಾಜೇಶ ಸಾವರಕರ, ಸರಕಾರಿ ಪ್ರೌಢಶಾಲೆ ಗುಂದ,(ತೃತೀಯ) ಸ್ಥಾನ. 8ರಿಂದ10 ನೇ ತರಗತಿ ಬಾಲಕಿಯರ ವಿಭಾಗದಲ್ಲಿ ನಿಖಿತಾ ವೇಳಿಪ,ಸರಕಾರಿ ಪ್ರೌಢಶಾಲೆ ಗುಂದ,(ಪ್ರಥಮ). ರಾಧಿಕಾ ಪಟಗಾರ,ಸರಕಾರಿ ಪ್ರೌಢಶಾಲೆ ಗುಂದ (ದ್ವಿತೀಯ). ರಕ್ಷಿತಾ ಮಿರಾಶಿ,ಶ್ರೀರಾಮ ಪ್ರೌಢಶಾಲೆ ಜೋಯಿಡಾ,(ತೃತೀಯ)ಸ್ಥಾನ ಪಡೆದಿರುತ್ತಾರೆ. ಗುಂದ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಫಕೀರಪ್ಪ ದರಿಗೊಂಡ,ದೈಹಿಕ ಶಿಕ್ಷಣ ಶಿಕ್ಷಕರಾದ ವೀರೇಶ ನಿಡವಣಿ ನಿರ್ಣಾಯಕರಾಗಿ ಉತ್ತಮ ನಿರ್ಣಯವನ್ನು ನೀಡಿರುತ್ತಾರೆ.
ಇವರ ಸಾಧನೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತುಕಾರಾಮರವರು, ಜೋಯಿಡಾ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಸಂತೋಷ ಮಂತೆರೋ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ,ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕಿ ವಿಜಯಲಕ್ಷ್ಮೀ ಹಂಜಿ,ತಾಲೂಕಾ ಶಿಕ್ಷಕಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ,ಕಾರ್ಯದರ್ಶಿಗಳಾದ ಮಹಾದೇವ ಹಳದನಕರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ(ಸಿ.ಆರ್.ಪಿ) ಭಾಸ್ಕರ ಗಾಂವ್ಕರ,ನಂದಿಗದ್ದೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಜನಾರ್ದನ ಹೆಗಡೆ,ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ಪಾಲಕರು,ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.
