ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ರಾಷ್ಟೀಯ ಸ್ವಯಂಸೇವಕ ಸಂಘ ರಾಮನಗರದ ವತಿಯಿಂದ ಸಂಘ ಶತಾಭ್ದಿಯ ನಿಮಿತ್ತ ವಿಜಯ ದಶಮಿ ಉತ್ಸವ ಕಾರ್ಯಕ್ರಮ ದಿನಾಂಕ:19 – 10- 2025 ರ ರವಿವಾರ ಮಧ್ಯಾಹ್ನ 3-00 ಗಂಟೆಗೆ,ಸಂಪತ್ ಸ್ಥಳ ಶ್ರೀರಾಮಲಿಂಗೇಶ್ವರ ದೇವಸ್ಥಾನ ಮೈದಾನ ರಾಮನಗರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಧರ್ಮಾಧಿಕಾರಿ ಶ್ರೀ ರಘುವೀರ ಗುರೂಜಿ ಶ್ರೀ ಸಂತೋಷಿಮಾತಾ ಮಠ ಆಶ್ರಮ ಕುಣಗಿನಿ, ಮುಖ್ಯ ವಕ್ತಾರರಾಗಿ ಶ್ರೀ ಶಾರ್ದೂಲ ಅರವಿಂದ ಜೋಶಿ, ಖಾನಾಪುರ ಹೋಬಳಿ ಬೌದ್ಧಿಕ ಪ್ರಮುಖರು ಉಪಸ್ಥಿತರಿರುವರು. ಸಹೋದರರು,ಸಹೋದರಿಯರು, ಶ್ರದ್ಧೆಯ ತಾಯಂದಿರು ಈ ಕಾರ್ಯಕ್ರಮದಲ್ಲಿ ಹತ್ತು ನಿಮಿಷ ಮುಂಚಿತವಾಗಿ ಭಾಗವಹಿಸಬೇಕೆಂದು ಸ್ವಯಂಸೇವಕರು ರಾಮನಗರದವರು ವಿನಂತಿಸಿಕೊಂಡಿದ್ದಾರೆ.
