ಸುದ್ಧಿಕನ್ನಡ ವಾರ್ತೆ
ಪಣಜಿ: ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಘಟಕ , ದಕ್ಷಿಣ ಗೋವಾ ಜಿಲ್ಲಾ ಮತ್ತು ಸಾಲಸೇಟ ತಾಲೂಕಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಅಗಷ್ಟ 17 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಗೋವಾದ ಮಡಗಾಂವ ವೀರಶೈವ ಲಿಂಗಾಯತ ಹಾಲ್ ನಲ್ಲಿ 3 ನೇಯ ವರ್ಷದ ಶ್ರಾವಣೋತ್ಸವ -2025 ಕಾರ್ಯಕ್ರಮ ಅಧ್ಧೂರಿಯಾಗಿ ಜರುಗಿತು. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಬೆಳಿಗ್ಗೆ 10 ಗಂಟೆಗೆ ಪ.ಪೂ ಶ್ರೀ ಶಿವಪಂಚಾಕ್ಷರಿ ಮಹಾಸ್ವಾಮಿಗಳು ಶ್ರೀ ಗುರು ಮಡಿವಾಳೇಶ್ವರ ಮಠ ಬುಡರಕಟ್ಟಿ ಬೆಳಗಾವಿ ರವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಸಮಾರಂಭದ ಉಧ್ಘಾಟಕರಾಗಿ ಗೋವಾ ನಾವೆಲಿಯ ಶಾಸಕ ಉಲ್ಲಾಸ ತುವೇಕರ್ ಆಗಮಿಸಿದ್ದರು. ಕಸಾಪ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೋವಾ ಇಂಡೊ-ಪೋರ್ಚುಗೀಸ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕ ಡಾ. ಅರವಿಂದ ಯಾಳಗಿ ಆಶಯದ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಸಂಸ್ಕøತ ನಿರ್ದೇಶನಾಲಯ ಭಾರತ ಸರ್ಕಾರ ನವದೆಹಲಿಯ ಡಾ. ಶಶಿಧರ ನರೇಂದ್ರ, ಧಾರವಾಡದ ಹಿರೀಯ ಸಾಹಿತಿ ಡಾ.ಕೃಷ್ಣಾ ಕಟ್ಟಿ, ಧಾರವಾಡದ ಹಿರೀಯ ರಂಗಕರ್ಮಿಗಳಾದ ಡಾ.ಪ್ರಕಾಶ ಗರುಡ, ಧಾರವಾಡದ ಹಿರೀಯ ರಂಗಕರ್ಮಿ ಹಾಗೂ ಚಿತ್ರನಟರಾದ ಅನಂತ ದೇಶಪಾಂಡೆ, ಧಾರವಾಡದ ಮನೋಹರ ಗೃಂಥಮಾಲೆ ವ್ಯವಸ್ಥಾಪಕರಾದ ಸಮೀರ್ ಜೋಶಿ ಉಪಸ್ಥಿತರಿದ್ದರು.

ಮಧ್ಯಾನ್ಹ 12 ರಿಂದ 1.30 ರವರೆಗೆ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಧಾರವಾಡದ ಮನೋಹರ್ ಗೃಂಥಮಾಲೆಯ ವ್ಯವಸ್ಥಾಪಕರಾದ ಸಮೀರ್ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಶ್ರಾವಣ ವೈಭವ ಬೇಂದ್ರೆ ಕಾವ್ಯದಲ್ಲಿ ಪ್ರಕೃತಿ ಹಾಗೂ ಸೌಂದರ್ಯ ಕುರಿತು ಡಾ. ಶಶಿಧರ ನರೇಂದ್ರ, ದತ್ತ ದರ್ಶನ ಬೇಂದ್ರೆ ಕಾವ್ಯದಲ್ಲಿ ಪ್ರೀತಿ ಪ್ರೇಮ ಹಾಗೂ ಅನುಭಾವಿಕ ನೆಲೆಗಳು ವಿಷಯದಲ್ಲಿ ಡಾ.ಕೃಷ್ಣಾ ಕಟ್ಟಿ, ಬೇಂದ್ರ ರವರ ನಾಟಕಗಳು ವಿಷಯದಲ್ಲಿ ಡಾ.ಪ್ರಕಾಶ ಗರುಡ, ದರಾ ಬೇಂದ್ರೆ ಜೀವನ ದರ್ಶನ ಏಕವ್ಯಕ್ತಿ ಅಭಿನಯ ವಿಷಯದ ಕುರಿತು ಉಪನ್ಯಾಸ ನೀಡಿದರು.

ಸಭಾ ಕಾರ್ಯಕ್ರಮದ ನಂತರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ-ಲಘು ಮನರಂಜನೆ ಕಾರ್ಯಕ್ರಮ ಜರುಗಿತು. ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಕಸಾಪ ಸಾಲಸೇಟ್ ತಾಲೂಕಾ ಅಧ್ಯಕ್ಷ ಬಸವರಾಜ್ ಬನ್ನಿಕೊಪ್ಪ, ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್ ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ, ಜಿಲ್ಲಾ ಹಾಗೂ ತಾಲೂಕಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೋವಾದ ವಿವಿದೆಡೆಯಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.