ಸುದ್ದಿ ಕನ್ನಡ ವಾರ್ತೆ
ತುಳುನಾಡಿನ ಬಂಟ ಸಮಾಜದ ಮಹಾ ವ್ಯಕ್ತಿ, ದಾನಿಗಳು ಆದ, ಎಂಜಿಆರ್ ಗ್ರೂಪಿನ ಪ್ರಕಾಶ್ ಶೆಟ್ಟಿ ಅವರನ್ನು ಗೋವಾ ಬಂಟ ಬಾಂಧವರು ಭೇಟಿಯಾಗಿ ಅವರು ಹೊಸದಾಗಿ ತಗೊಂಡ ಜೆಟ್ ವಿಮಾನಕ್ಕೆ ಶುಭಾಶಯವನ್ನು ಹೇಳಿ ಹಾಗೂ ನಮ್ಮ ಬಂಟ ಸಮಾಜ ಗೋವಾಕ್ಕೆ ಯಾವುದಾದರೂ ಒಂದು ಸಹಾಯ ಮಾಡಲು ಭೇಟಿಯಾಗಿ ಮನವಿ ಮಾಡಲಾಯಿತು.
ಅವರು ಸಂಪೂರ್ಣ ಸಹಾಯ ಮಾಡುವೆನೆಂಬ ಭರವಸೆ ನೀಡಿದರು. ಅವರೊಟ್ಟಿಗೆ ಇನ್ನುಳಿದ ಗುರ್ಮೆ ಸುರೇಶ್ ಶೆಟ್ಟಿ, ಪೂನಾ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ , ಹುಬ್ಬಳ್ಳಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸುಗ್ಗಿ ಸುಧಾಕರ್ ಶೆಟ್ಟಿ, ಮಹೇಶ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ, ಸಾಗರ ಬಂಟರ ಸಂಘದ ಅಧ್ಯಕ್ಷರು ಸುಧೀರ್ ಶೆಟ್ಟಿ,ಮಾಜಿ ಶಾಸಕ ಸಿ ಟಿ ರವಿ ಇವರೆಲ್ಲರನ್ನು ಗೋವಾ ಬಂಟರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿದರು.
