ಸುದ್ದಿ ಕನ್ನಡ ವಾರ್ತೆ
ಬಾಗಲಕೋಟೆ::ಕ್ರಿಕೆಟ್ ಚೆಂಡು ಬಡಿದದ್ದಕ್ಕಾಗಿ ಬಾಲಕರನ್ನು ಶಾಲಾ ಕಿಟಿಕಿಗೆ ಕಟ್ಟಿಹಾಕಿ ಥಳಿಸಿದ ಘಟನೆ ಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯ ನರೇನೂರ ತಾಂಡಾದಲ್ಲಿ ನಡೆದಿದೆ.ಘಟನೆ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ರೇಣುಕಾ ಗೋಪಾಲ ಲಮಾಣಿ,ಆಕೆಯ ಪುತ್ರ ಬಸವರಾಜ ಗೋಪಾಲ ಲಮಾಣಿ, ಅಭಿ ಶಿವಪ್ಪ ಲಮಾಣಿ ಆರೋಪಿಗಳು.
ಜೂ.೨೧ರ ರವಿವಾರ ದಂದು ಈ ಘಟನೆ ನಡೆದಿದೆ. ಕ್ರಿಕೆಟ್ ಆಡುತ್ತಿದ್ದಾಗ ಆರೋಪಿ ರೇಣುಕಾಗೆ ಚೆಂಡು ಬಡೆದಿದೆ.ಆಗ ಆರೋಪಿಗಳು ಇಬ್ಬರು ಬಾಲಕರನ್ನು ಶಾಲಾ ಕಿಟಕಿಗೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
