ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸಪ್ತಸ್ವರ ಸೇವಾ ಸಂಸ್ಥೆ(ರಿ)ಯರಮುಖ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಮಟ್ಟದ ಆನ್ ಲೈನ್ ಕನ್ನಡ ಗೀತೆಗಳ ಸ್ಪರ್ಧೆಯನ್ನು ನವೆಂಬರ 01-11-2025 ರಿಂದ 01-12-2025 ರ ವರೆಗೆ ಆಯೋಜಿಸಿದ್ದಾರೆ.

ಸ್ಪರ್ಧೆಗಳ ನಿಯಮಗಳನ್ನು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ಮೈಕ್ ಹೊಂದಿರುವ ಬ್ಲೂಟೂತ್‌ ಸ್ಪೀಕರ್,ದ್ವಿತೀಯ ಬ್ಲೂಟೂತ್‌ ಬಲ್ಬ್ ,ಭಾಗವಹಿಸಿದ ಎಲ್ಲರಿಗೂ ಇ-ಅಭಿನಂದನಾ ಪತ್ರ ನೀಡಲಾಗುವುದು ಎಂದು ಸಂಘಟಕರಾದ ಸಪ್ತಸ್ವರ ಸೇವಾ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ,ಪದಾಧಿಕಾರಿಗಳಾದ ಅರ್ಚನಾ ಹೆಗಡೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಭಾಗವಹಿಸುವಂತೆ ವಿನಂತಿಸಿಕೊಂಡಿದ್ದಾರೆ.