ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ಜೋಯಿಡಾ ದ ಸಪ್ತಸ್ವರ ಸೇವಾ ಸಂಸ್ಥೆಯವರು ಕಳೆದ ಇಪ್ಪತ್ತೆರಡುವರ್ಷ ಗಳಿಂದ ಕಲೆ,ಸಾಹಿತ್ಯಸಂಗೀತನೃತ್ಯಸಾಮಾಜಿಕ ಕ್ಷೇತ್ರ,ಸೇರಿದಂತೆ ಯಕ್ಷಗಾನ ರಂಗ ದ ಉಳಿವಿಗೆ ಶ್ರಮಿಸುತ್ತಿದ್ದಾರೆ ಎಂದು ನಂದಿಗದ್ದೆ ಗ್ರಾಮ ಪಂಚಾಯತ್ ಸದಸ್ಯ ಧವಳೋ ಸಾವರ್ಕರ ಹೇಳಿದರು.

ಅವರು ಯರಮುಖ ದ ದಿವಂಗತ ಸದಾನಂದ ಹೆಗಡೆ ವೇದಿಕೆಯಲ್ಲಿ ನಡೆಯುತ್ತಿರುವ ಯಕ್ಷ ದಶಮಾನೋತ್ಸವ ಕಾರ್ಯಕ್ರಮ ದಲ್ಲಿ ಬಾಗವಹಿಸಿ ಮಾತನಾಡುತ್ತಿದ್ದರು.

ಮಕ್ಕಳು,ಯುವಕರು, ಯುವತಿಯರು, ಪುರುಷರು,ಮಹಿಳೆಯರು ಸೇರಿದಂತೆ ಹಿರಿಯರನ್ನು ಸನ್ಮಾನಿಸಿ,ಗೌರವಿಸುವ ಮೂಲಕ ವರ್ಷದಿಂದ ವರ್ಷಕ್ಕೆ ತಮ್ಮ ಛಾಪನ್ನು ಮೂಡಿಸಿ ಉತ್ತುಂಗದ ದಾಪುಗಾಲನ್ನೀಡುತ್ತಾ ,ಊರಿನ ಪರ ಊರಿನ ಕಲಾವಿದರನ್ನು ಕರೆಸಿ ಬೆಳೆಸುವ ಕಾರ್ಯಸಂಸ್ಥೆ ಮಾಡುತ್ತಿದೆ ಯಾವುದೇ ವ್ಯಕ್ತಿ, ಸಂಘಟನೆ , ಸಂಸ್ಥೆಯಾಗಲಿ ತಾನು ಬೆಳೆದು, ತಮ್ಮವರನ್ನು ಬೆಳೆಸುವ ಭಾವನೆ ಇದ್ದಲ್ಲಿ ಅದು ಸಮಾಜದಲ್ಲಿ ನಿರಂತರವಾಗಿಇರುತ್ತದೆಎಂದರು.

.

ಈ ಸಂದರ್ಭದಲ್ಲಿ ಭಾಸ್ಕರ ಗಾಂವ್ಕರ ಬಿದ್ರಮನೆ ಸಮೂಹ ಸಂಪನ್ಮೂಲ ವ್ಯಕ್ತಿ ಶಿಕ್ಷಣ ಇಲಾಖೆ,ಜೋಯಿಡಾ,ಮತ್ತು ಚಂದ್ರಕಾಂತ ರಾಮಯ್ಯ ನಾಯ್ಕ ಮೂರ್ತಿ ರಚನಕಾರರು ಅಂಕೋಲಾ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಸನ್ಮಾನಿತರಾದ ಭಾಸ್ಕರ ಗಾಂವ್ಕರ ಮಾತನಾಡಿ ಸಪ್ತಸ್ವರ ಸೇವಾ ಸಂಸ್ಥೆಯವರು ಹಲವು ತೊಂದರೆ,ತೊಡಕುಗಳ ಮಧ್ಯೆಯೂ ಮಕ್ಕಳಿಗೆ ಯಕ್ಷಗಾನದ ಕಲೆಯನ್ನು ಬಾಲ್ಯದಲ್ಲಿ ಕಲಿಸಿ ಮುಂದಿನ ಪೀಳಿಗೆಗೆ ಒಯ್ಯುವ ಪ್ರಯತ್ನಮಾಡುತ್ತಿದ್ದಾರೆ ನಾನು,ಬಹಳ ವರ್ಷಗಳಿಂದ ಭಾಂಧವ್ಯಹೊಂದಿದ, ಕಾರ್ಯ ಕ್ಷೇತ್ರವಾದ ಗುಂದದ ಪರಿಸರದಲ್ಲಿ ಸನ್ಮಾನ ಮಾಡುತ್ತಿರುವುದು ಸಂತಸದ ವಿಷಯ,ಮುಂದಿನ ದಿನಗಳಲ್ಲಿ ಯಕ್ಷಗಾನ ಪ್ರದರ್ಶನದ ಸಮಯ ಹಾಗೂ ಗುಣಮಟ್ಟದ ಪ್ರದರ್ಶನಕ್ಕೆ ಒತ್ತು ನೀಡುವ ಕಡೆ ಗಮನ ಇರಲಿ ಎಂದು ಹೇಳಿದರು. ಯಕ್ಷಾಭಿಮಾನಿ ಇಂದುಮತಿ ದೇಸಾಯಿ ಸಂಸ್ಥೆಯ ಕಾರ್ಯವೈಖರಿ ಮೆಚ್ಚಿ ಮಾತನಾಡಿದರು.

ಕಾರ್ಯಕ್ರಮ ದ ಅಧ್ಯಕ್ಸತೆ ವಹಿಸಿದ್ದ ಸುಬ್ರಾಯ ದಾನಗೇರಿ ಮಾತನಾಡಿ ಇಪ್ಪತ್ತೇರಡು ವರ್ಷಗಳ ಹಿಂದೆ ಚಿಕ್ಕ ಸಸಿಯ ರೂಪದಲ್ಲಿದ್ದ ಸಪ್ತಸ್ವರ ಸೇವಾ ಸಂಸ್ಥೆಯು ಎಲ್ಲರ ಸಹಕಾರದಿಂದ ಹೆಮ್ಮರವಾಗಿ ಬೆಳೆದಿದೆ ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದು ಹೇಳಿದರು. ಯಕ್ಷಾಭಿಮಾನಿಗಳಾದ ನರಸಿಂಹ ಸದಾನಂದ ಹೆಗಡೆ,ಸೋಮಣ್ಣ ಎಂ ಕಾಡಪೋಡಕರ, ಚಂದ್ರಕಾಂತ ರಾಮಯ್ಯ ನಾಯ್ಕ ಆನಂದು ಆಗೇರ,ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸರೋಜಾ ದೇಸಾಯಿ ಸನ್ಮಾನಪತ್ರ ವಾಚನ ಮಾಡಿದರೆ,ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸದಸ್ಯೆ ಸೀತಾ ದಾನಗೇರಿ ಅತ್ಯುತ್ತಮವಾಗಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು. ನಂತರ ಸಹ್ಯಾದ್ರಿ ಬಳಗದ ಸುದರ್ಶನ ಹೆಗಡೆ ಇವರ ನೇತೃತ್ವದಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರಸಂಗದ ಪ್ರದರ್ಶನ ನೆರೆದಿದ್ದ ಯಕ್ಷಾಭಿಮಾನಿಗಳ ಮನಸೂರೆ ಗೊಂಡಿತು.