ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಜಗತ್ತು ಈಗ 21ನೇ ಶತಮಾನದಲ್ಲಿ ನಡೆದಿದೆ, ಸಾಕಷ್ಟು ತಂತ್ರಜ್ಞಾನ ಬೆಳವಣಿಗೆ ಆಗಿದೆ. ಯಾವುದೇ ಕೆಲಸಕ್ಕೆ ಈಗ ಮೊಬೈಲ್. ಅಥವಾ ತಂತ್ರಜ್ಞಾನದ ಮೂಲಕವೇ ಆಗಬೇಕು, ಆಗುತ್ತಿದೆ, ಆದರೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಮಾತ್ರ, ವಿಭಿನ್ನ.
ಇಲ್ಲಿ ಯಾವುದೇ ತಂತ್ರಜ್ಞಾನ ವಾಗಲಿ, ತಾಂತ್ರಿಕ ಶಿಕ್ಷಣ ವಾಗಲಿ ಯಾರಿಗೂ ಬೇಡ, ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕೆಲಸ ಗಳನ್ನು ದಾಂಡೇಲಿ ಯಲ್ಲಿಯೋ, ಹಳಿಯಾಳ ದಲ್ಲಿಯೋ ಮಾಡಿಕೊಂಡು, ನೆಪ ಮಾತ್ರಕ್ಕೆ ಕಚೇರಿಗೆ ಬರುತ್ತಾರೆ, ಕಛೇರಿ ಗಳಲ್ಲಿ ಸರ್ವರ್ ಸರಿ ಇಲ್ಲ, ನೆಟ್ವರ್ಕ್ ಇಲ್ಲ, ಕರೆಂಟ್ ಇಲ್ಲ, ಎನ್ನುವುದು ಬಿಟ್ಟು ಬೇರೇನಿಲ್ಲ, ಯಾವ ಜವಾಬ್ದಾರಿ, ಜನಪ್ರತಿನಿದಿಗಳಾಗಲಿ, ಅಧಿಕಾರಿ ಗಳಾಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಯಾಕೆ ಎಂದು ಯಾರೂ ಕೇಳುತ್ತಿಲ್ಲ, ಕಳೆದ ವರ್ಷ ತಾಲೂಕಿಗೆ, ಹಳ್ಳಿ ಹಳ್ಳಿ ಗಳಿಗೂ ನಗರ ಪ್ರದೇಶ ಗಳಿಗೂ ಸಂಪರ್ಕಕ್ಕೆ ಅನುಕೂಲ ವಾಗಲಿ ಎಂದು ಕೇಂದ್ರ ಸರಕಾರ 47 ಬಿ ಎಸ್ಎನ ಎಲ್ ಟವರ್ ಗಳನ್ನು ತಾಲೂಕಿಗೆ ನೀಡಿತ್ತು ಆದರೆ ಇದು ವರೆಗೂ ಒಂದೇ ಒಂದು ಟವರ್ ನಿರ್ಮಾಣ ವಾಗಿಲ್ಲ, ಕೆಲಸದ ಪ್ರಗತಿಯೂ ಇಲ್ಲ ಈ ಬಗ್ಗೆ ಯಾರೂ ಮಾಹಿತಿ ಯನ್ನು ಜನತೆಗೆ ಹೇಳುವ ಅಧಿಕಾರಿಗಳೂ ಇಲ್ಲ.ಹಾಗಾಗಿ ತಾಲೂಕಿನ ಬಡ ಜನತೆ ರೇಷನ್ ಪಡೆಯುವಾಗ ಎಲ್ಲೊ ಹೋಗಿ ಹೆಬ್ಬೆರಳು ಒತ್ತಿ ಇನ್ನೆಲ್ಲೋ ಹೋಗಿ ಆಹಾರ ಧಾನ್ಯ, ಪಡೆಯುತ್ತಿದ್ದಾರೆ.
ತಾಲೂಕಿನಲ್ಲಿ ಸರಿಯಾದ ಯಾವ ನೆಟ್ವರ್ಕ್ ಗಳೂ ಇಲ್ಲದೇ ಜನ ರೋಶಿ ಹೋಗಿದ್ದಾರೆ. ಕಳೆದ ಒಂದು ವರ್ಷ ದಿಂದ ಜೋಯಿಡಾ ಬಿ.ಎಸ್ ಎನ್ ಎಲ್ ಕಚೇರಿಯ ಸುತ್ತಲೂ ತಂದು ಒಗೆದ 47 ಟವರ್ ಗಳ ಕೇಬಲ್ ಬಂಡಲ್ ಗಳು, ಇಲಿ ಹೆಗ್ಗಣ ಗಳಿಗೆ ಮನೆಯಾಗಿವೆ. ಕೇಂದ್ರ ಸರಕಾರದ ಯೋಜನೆ ಎಂಬ ಅಭಿಮಾನ ದಿಂದ ಲಾದರೂ ಬಿಜೆಪಿ ಯ ಜನರು ವಿಚಾರಿಸಿ ಸಂಸದ ರಿಗೆ ಮಾಹಿತಿ ಕೊಟ್ಟು ತಾಲೂಕಿನ ಅಭಿವೃದ್ಫಿಗೆ ಶ್ರಮಿಸ ಬೇಕಾಗಿತ್ತು, ಅದೂ ಆಗಿಲ್ಲ, ಯಾರಿಗೆ ಹೇಳೋಣ ಎಂದು ತಾಲೂಕಿನ ಗ್ರಾಮೀಣ ಜನ ನೆಟ್ವರ್ಕ್ ಇಲ್ಲದ ಮೊಬೈಲ್ ಹಿಡಿದು ಓಡಾಡುತ್ತಿದ್ದಾರೆ.