ಸುದ್ದಿ ಕನ್ನಡ ವಾರ್ತೆ
ಭಟ್ಕಳ:ತಾಲೂಕಿನ ಸರಕಾರಿ ಪ್ರೌಢಶಾಲೆ ತೆಂಗಿನಗುಂಡಿಯಲ್ಲಿ 2007-08 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮಾಗಮ ಕಾರ್ಯಕ್ರಮ, ಅರ್ಥಪೂರ್ಣವಾಗಿ ನೆರವೇರಿತು.
ಮರಳಿ ಗೂಡಿಗೆ ಇದು ಗುರು-ಶಿಷ್ಯರ ಸಮಾಗಮ ಎಂಬ ಶೀರ್ಷಿಕೆಯಲ್ಲಿ ನಡೆದ ನೆನಪುಗಳನ್ನು ಮತ್ತೆ ಜೀವಂತಗೊಳಿಸಿತು. 2005 ರಿಂದ ವಿವಿಧ ಅವಧಿಯಲ್ಲಿ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ವರ್ಗಾವಣೆಯಿಂದ ಬೇರೆಡೆ ತೆರಳಿದ ಶಿಕ್ಷಕರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹೋದ್ಯೋಗಿಗಳೊಂದಿಗೆ ಕಳೆದ ಕ್ಷಣಗಳು ಹಾಗೂ ವಿದ್ಯಾರ್ಥಿಗಳೊಂದಿಗಿನ ಆತ್ಮೀಯ ಗುರು-ಶಿಷ್ಯ ಬಂಧವನ್ನು ನೆನೆದು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡ ಶಾಲಾ ದಿನಗಳ ಅನುಭವಗಳನ್ನು ಸ್ಮರಿಸಿ ಸಂಭ್ರಮಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ
ಎಲ್ಲಾ ಶಿಕ್ಷಕರುಗಳು ಸೇರಿ ನೆರವೇರಿಸಿದರು. ಈ ವೇಳೆ ಎಸ್.ವಿ. ನಾಯಕ, ಶಂಷಾದ್
ಸೈಯ್ಯದ್ ಅಸದುಲ್ಲಾ, ಸಂತೋಷ ಎಸ್. ಶ್ರೇಷ್ಟಿ, ಎಂ.ಆರ್. ನಾಯಕ, ಜಿ.ಆರ್.
ಪಟಗಾರ, ರಾಜೇಶ್ ಹೆಚ್, ನಾಯಕ,ವಿದ್ಯಾ ನಾಯಕ,ಎಸ್ ಜೆ ಖಾನ್, ವಿಮಲಾ ಪಟಗಾರ, ಜೋಸಫ್ ಬಿ ಗೊನ್ಸಾಲಿಸ್, ಸತೀಶ್ ಜಿ. ನಾಯ್ಕ, ಗೀತಾ ಮೇಸ್ತ, ಆಶಾ ಪೈ ಹಾಗೂ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕರ ಪೈಕಿ ಅಸ್ತಂಗತರಾದ ದಿ.ಎಂ ಬಿ ನಾಯ್ಕ ಹಾಗೂ ದಿ. ಗಿರಿಜಾ ಕಾಶಿ ಹೆಗಡೆ. ಮತ್ತು ವಿದ್ಯಾರ್ಥಿಗಳ ಪೈಕಿ ಅಸ್ತಂಗತರಾದ ದಿ. ರಾಜೇಶ್ ಮೊಗೇರ್ ಹಾಗೂ ದಿ. ಜನಾರ್ಧನ ದೇವಾಡಿಗ ಅವರ ಸ್ಮರಣಾರ್ಥ ಎರಡು ನಿಮಿಷಗಳ ಮೌನಾಚರಣೆ ಹಾಗೂ ಪುಷ್ಪಾರ್ಪಣೆ
ನೆರವೇರಿಸಲಾಯಿತು.
ಈ ವೇಳೆ ವಿದ್ಯಾರ್ಥಿಗಳು ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು. ಶಿಕ್ಷಕರುಗಳು ಸಹ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಸ್ಮರಣಾರ್ಥ ಕಾಣಿಕೆಗಳನ್ನು ವಿತರಿಸಿದರು. ಶಾಲಾ ಆವರಣದಲ್ಲಿ ನಡೆದ ಈ ಸಮಾಗಮವು ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ನೆನಪಿನಲ್ಲಿ ಉಳಿಯುವ ಸ್ಮರಣೀಯ ದಿನವಾಗಿ ಪರಿಣಮಿಸಿತು.
ಕಾರ್ಯಕ್ರಮದ ನಿರೂಪಣೆಯನ್ನು ಹಳೆಯ ವಿದ್ಯಾರ್ಥಿನಿ ಸೀಮಾ ನಾಯ್ಕ ನಿರ್ವಹಿಸಿದರು. ಗೀತಾ ಪೂಜಾರಿ ಸ್ವಾಗತಿಸಿದರು. ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಜೋಸಫ್ ಬಿ ಗೊನ್ಸಾಲಿಸ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
