ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖ ಗ್ರಾಮದ ತಮ್ಮಣಗಿ ಮಜರೆಯ ಗುಂದ ಸೀಮಾ ಪರಿಷತ್ ಅಧ್ಯಕ್ಷ ಡಿ.ಟಿ. ಹೆಗಡೆಯವರ ಮನೆಯಲ್ಲಿ ದಿನಾಂಕ:02-11-2025 ರ ರವಿವಾರ ಭಗವದ್ಗೀತೆ ಸಪ್ತಾಹಕ್ಕೆ ವೇದಮೂರ್ತಿ ಪ್ರವೀಣ ಭಟ್ಟ ಅವರ ಪುರೋಹಿತ್ಯದಲ್ಲಿ ದೀಪ ಪ್ರಜ್ವಲನ ಮಾಡುವ ಮೂಲಕ ಚಾಲನೆ ನೀಡಿದರು.
ಶ್ರೀಭಗವದ್ಗೀತಾ ಅಭಿಯಾನ- ಕರ್ನಾಟಕ,ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ,ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ(ರಿ) ಶಿರಸಿ(ಉ.ಕ)ಇವರ ಮಾರ್ಗದರ್ಶನದಲ್ಲಿ ಭಗವದ್ಗೀತೆಯ 11ನೇಯ ಅಧ್ಯಾಯದ ಪಠಣ ನಡೆಯಲಿದೆ.ತಮ್ಮಣಗಿ ಮಜರೆಯ ಮಾತೆಯರು,ಭಕ್ತವೃಂದದವರು ಉಪಸ್ಥಿತರಿದ್ದರು.
