ಸುದ್ದಿ ಕನ್ನಡ ವಾರ್ತೆ

ಜೋಯಿಡಾ ಎಂದ ಕೂಡಲೇ ಏನೋ ವಿಶೇಷತೆ ಇದೆ ಎಂದು ಅನಿಸಿದರೆ ತಪ್ಪಿಲ್ಲ. ಇಲ್ಲಿ ಎಲ್ಲವೂ ಇದೆ ಆದರೆ ಏನೂ ಇಲ್ಲ. ಇದೇನು ಹೀಗೆ,,,, ಅಂತೀರಾ ಒಮ್ಮೆ ಜೋಯಿಡಾ ಕ್ಕೆ ಬನ್ನಿ ನೀವು ಹೌಹಾರಿ ಬಿಡುತ್ತೀರಿ, ನಿಮ್ಮ ಮೊಬೈಲ್ ಸಿಮ್ ಇಲ್ಲಿ ಕೆಲಸ ಮಾಡೋದಿಲ್ಲ, ನೀವು ಯಾರನ್ನೋ ಸಂಪರ್ಕಿಸಲು ಯಾರದೋ ಮೊಬೈಲ್ ಪಡೆದು ಸಂಪರ್ಕಿಸ ಬೇಕು.

ಕೇವಲ ಬಿ ಎಸ್ ಎನ್ ಎಲ್ ಆಗಾಗ ವಿದ್ಯುತ್ ಇದ್ದಾಗ ಕೆಲಸ ಮಾಡುತ್ತದೆ, ಬಸ್ಸಿಗೆ ಬಂದರೆ ದಾರಿ ಯಲ್ಲಿ ಬಸ್ ಏನಾದರೂ ಕೆಟ್ಟರೆ ಇಲ್ಲಿ ಡಿಪೋ ಇಲ್ಲ, ಬದಲಿ ವ್ಯವಸ್ಥೆಗೆ ದಾಂಡೇಲಿ ಡಿಪೋ ದವರು ಬಸ್ ಇದ್ದರೆ ಕಳಿಸಿ ಕೊಟ್ಟಾಗ ಮಾತ್ರ ವ್ಯವಸ್ಥೆ ಇಲ್ಲ ಎಂದಾದರೆ ದಿನವಿಡೀ ಕಾಯ್ದು ಕಂಡವರ ಕಾಲು ಹಿಡಿದು ಸೇರ ಬೇಕಾದಲ್ಲಿ ಸೇರುವ ಸ್ಥಿತಿ ಇದೆ. ತಾಲೂಕಿನವರಿಗೆ ಏನೋ ನೊಂದಣಿ ಕೆಲಸ ವಿದೆ ಎಂದರೆ, ಸಬ್ ರಜಿಸ್ಟ್ರಾರ ಕಚೇರಿ ಇಲ್ಲ, ದಾಂಡೇಲಿ ದಾಟಿ ಹಳಿಯಾಳ ತಾಲೂಕಿಗೆ ಹೋಗಬೇಕು, ಏನೋ ಸಮಸ್ಯೆ ಗೆ ಪರಿಹಾರಕ್ಕೆ ಕೋರ್ಟಿಗೆ ಹೋಗೋಣ ಎಂದರೆ ಇಲ್ಲಿ ಕೋರ್ಟ ಕೂಡ ಇಲ್ಲ ಎಂದರೆ ನಿಮಗೆ ಅಚ್ಚರಿ ಆಗಬಹುದು

ಆದರೆ ಇದು ನಿಜ, ಶಾಲೆ ಕಾಲೇಜು ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸುವ ಕೌಂಟರ್ ಕೂಡ ಇಲ್ಲ ಎಂದರೆ ಇದು ತಾಲೂಕಾ ಕೇಂದ್ರವೇ ಎಂದು ನಿಮಗೆ ಅನ್ನಿಸಬಹುದು, ಆದರೂ ಇದು ತಾಲೂಕಾ ಕೇಂದ್ರವೇ ಹೌದು. ಎಲ್ಲ ಕೆಲಸ ಕಾರ್ಯ ಗಳಿಗೆ ದಾಂಡೇಲಿ ಹಳಿಯಾಳ ಗಳಿಗೆ ಓಡಬೇಕಾಗಿದೆ, ಅಷ್ಟೇ ಅಲ್ಲ ಇಲ್ಲಿ ಇರುವ ಗ್ರಾಮ ಒನ್ ಗಳೂ ಕೂಡ ಕೆಲಸ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪ ಗಳೂ ಇವೆ. ಸದ್ಯ ದ ಸರಕಾರ ಅಧಿಕಾರಕ್ಜೆ ಬಂದು ಮೂರು ವರ್ಷ ಕ್ಕೆ ಹತ್ತಿರ ಬಂದರೂ ಜಿಲ್ಲಾ ಉಸ್ತುವಾರಿ ಸಚಿವರು, ಒಂದೇ ಒಂದು ಬಾರಿ ಇಲ್ಲಿ ಬಂದು ಅಭಿವೃದ್ಧಿ ಸಭೆ ನಡೆಸಿಲ್ಲ, ಶಾಸಕರೂ ಕೂಡ ಕಳೆದ ಏಪ್ರಿಲ್ ನಲ್ಲಿ ಸಭೆ ನಡೆಸಿದ ಮೇಲೆ ಈಗ ಆರು ತಿಂಗಳು ಕಳೆದರೂ ಅಭಿವೃದ್ಧಿ ಸಭೆ ನಡೆಸಿಲ್ಲ. ಸ್ಥಳೀಯ ಜನಪ್ರತಿನಿದಿಗಳು ಕೂಡ ಈ ಬಗ್ಗೆ ಚಿಂತೆ ಮಾಡಿದಂತೆ ಕಂಡು ಬರುತ್ತಿಲ್ಲ. ಇಷ್ಟೇ ಅಲ್ಲ ತಾಲೂಕಿನ ಇನ್ನೂ ಹಲವಾರು ಸಮಸ್ಯೆ ಗಳಿದ್ದು ಆಸಕ್ತಿಯಿಂದ ಕೆಲಸ ಮಾಡುವ ಅಧಿಕಾರಿಗಳ ಕೊರತೆ ಕೂಡ ಇರುವದು ಕಂಡು ಬರುತ್ತಿದೆ. ಒಟ್ಟಾರೆ ಯಾರಿಗೆ ಹೇಳೋಣ ನಮ್ಮ ಕಷ್ಟ ಎಂಬ ಚಿಂತೆ ಯಲ್ಲಿಯೇ ವರ್ಷ ಗಳು ಉರುಳುತ್ತಿವೆ