ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ  ತಾಲೂಕಿನ ಎಲ್ಲೆಡೆ ಅಡಿಕೆ ತೋಟಕ್ಕೆ ಅಡಿಕೆ ಕೊಳೆರೋಗ ಕಾಣಿಸಿಕೊಂಡಿದೆ.

.ಬಿಡದೇ, ಬೀಳುವ ಮಳೆಗೆ ಅಡಿಕೆಬೆಳೆಗಾರರುಕೊಳೆಚಿಂತೆ ಯಲ್ಲಿ ಏನು ಮಾಡಲಿ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.ನಂದಿಗದ್ದಾ ಗ್ರಾಮ ಪಂಚಾಯತ ದ ಅವುರ್ಲಿ, ನಂದಿಗದ್ದೆ, ಚಿಂಚಖಂಡ, ಕರಿಯಾದಿ, ಬೆಡಸಗದ್ದೆ, ಯರಮುಖ, ಶೇವಾಳಿ, ಗುಂದ ಈ ಎಂಟು ಗ್ರಾಮ ಗಳ ತೋಟ ಗಳಿಗೆ ಅಡಿಕೆ ಕೊಳೆ ರೋಗ ಭಾರಿ ಪ್ರಮಾಣ ದಲ್ಲಿ ಬಂದಿದ್ದು ಬಿದ್ದ ಅಡಿಕೆ ಸುಲಿಯಲೂ, ಬಾರದೇ, ಒಣಗಿಸಲು ಬಿಸಿಲೂ ಇಲ್ಲದೇ, ಕೊಳೆಯುತ್ತ ಇರುವುದನ್ನು ನೋಡಲು ಸಾಧ್ಯ ವಿಲ್ಲ, ಎಂದು ರೈತರು ಹೇಳುತ್ತಿದ್ದಾರೆ.

ಈ ವರ್ಷ ಬೆಳೆ ಕಡಿಮೆ ಇದ್ದು, ಅದರಲ್ಲೂ ಕೊಳೆಯಿಂದ ಅಡಿಕೆ ಬಿದ್ದು ಹೋದರೆ, ಸಾಲ ಮಾಡಿ ಜೀವನ ನಿರ್ವಹಿಸುತ್ತಿರುವ, ಕೃಷಿಕರ ಪಾಡೇನು, ನಮ್ಮ ಮುಂದಿನ ಜೀವನ ನಿರ್ವಹಣೆ ತುಂಬಾ ಕಷ್ಟ ಕರ ವಾಗಿದೆ ಸರಕಾರ ಪರಿಹಾರ ನೀಡಿ ನಮಗೆ ಬದುಕುವ ಅವಕಾಶ ನೀಡಲಿ ಎಂದು ರೈತರು ಸರಕಾರಕ್ಕೆಈ ಮೂಲಕ ಆಗ್ರಹಿಸಿದ್ದಾರೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ರೈತರ ನೆರವಿಗೆ ಬರಬೇಕು, ಎಂದು ಆಗ್ರಹಿಸಿದ್ದಾರೆ. .. ……

ಸೋಮಣ್ಣ ವೇಳಿಫ್ ಅವುರ್ಲಿ ಗ್ರಾಮ ದ ಕೃಷಿಕ ಇದೇ ನೋಡಿ ಕೊಳೆ ಅಡಿಕೆ, ನಾವು ಕಷ್ಟ ಪಟ್ಟು ಬೆಳೆದ ಬೆಳೆ ಹಾಳಾಗುತ್ತಿದೆ, ಬೀಳುವ ಅಡಿಕೆ ಪ್ರತಿದಿನ ಆರಿಸಲು ಆಗುತ್ತಿಲ್ಲ, ಆರಿಸುತ್ತಿರುವಾಗ, ಅಡಿಕೆ ಬೀಳುತ್ತಲೇ ಇರುತ್ತದೆ, ಅನ್ನುತ್ತಾರೆ.