ಸುದ್ದಿ ಕನ್ನಡ ವಾರ್ತೆ
ದಾಂಡೇಲಿಯ ಹೆಸ್ಕಾಂ ಉಪ ವಿಭಾಗ ಕಛೇರಿಯಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ(ನಾಳೆ) ನಡೆಯ ಬೇಕಾಗಿದ್ದ ಸಭೆಯನ್ನು ರಂಜಾನ್ ಹಬ್ಬದ ನಿಮಿತ್ತ ದಿನಾಂಕ 23 ಸೋಮವಾರದ ದಿನ ಮಧ್ಯಾಹ್ನ 3.30 ಘಂಟೆಗೆ ದಾಂಡೇಲಿಯಲ್ಲಿ ಕರೆಯಲಾಗಿದೆ.
ಹೆಸ್ಕಾಂ ದಾಂಡೇಲಿ ಉಪ ವಿಭಾಗ ಕಚೇರಿಯಲ್ಲಿ ನಡೆಯುವ ಸಭೆಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಮಸ್ಯೆಗಳನ್ನು ಚರ್ಚಿಸಿ ಸಂವಾದ ಸಭೆಯನ್ನು ಯಶಸ್ವಿ ಗೊಳಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಕಾರ್ಯಪಾಲನಾ ವಿಭಾಗದ ಅಧಿಕಾರಿ ದೀಪಕ್ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
