ಸುದ್ದಿ ಕನ್ನಡ ವಾರ್ತೆ
ಪಣಜಿ: ಭಾರತೀಯ ನೌಕಾದಳು ಸಮುದ್ರ ಸುರಕ್ಷತೆ ಮತ್ತು ಅಂತರಾಷ್ಟ್ರೀಯ ಸಾಹಸಕ್ಕೆ ಸಂಬಂಧಿಸಿದಂತೆ ತಾನು ಅಂಕಣ ಬದ್ಧವಾಗಿರುವುದಾಗಿ ಮತ್ತೊಮ್ಮೆ ಸಿದ್ದಪಡಿಸಿದೆ. ಕೊಚ್ಚಿಯಿಂದ ಸುಮಾರು 1500 ಕಿಲೋಮೀಟರ್ ದೂರ ಸಮುದ್ರದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇರಾನಿ ಮೀನುಗಾರರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
ಗಾಯಗೊಂಡ ಈ ಮೀನುಗಾರರನ್ನು ಗೋವಾ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಚಿಕಿತ್ಸೆಗಾಗಿ ಕರಿತರಲಾಗಿದ್ದು ಸದ್ಯ ಈ ಮೀನುಗಾರನ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ ಓವೈಸ್ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿತ್ತು. ಈ ಮೀನುಗಾರಿಕಾ ಬೋಟ್ ನಲ್ಲಿ ಸ್ಪೋಟ ಒಂದು ಸಂಭವಿಸಿದ್ದರಿಂದ ಮೀನುಗಾರರೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಈ ಘಟನೆಯ ಮಾಹಿತಿಯನ್ನು ಎಂ ಆರ್ ಸಿ ಸಿ ಗೆ ನೀಡಲಾಗಿತ್ತು. ಘಟನೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಕೂಡ್ದೆ ಧಾವಿಸಿ ಬಂದು ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು.
ಸಮುದ್ರದಲ್ಲಿಯೇ ಕೂಡಲೇ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿದ ನಂತರ ಗಾಯಗೊಂಡ ಈ ಮೀನುಗಾರನನ್ನು ನೋಕಿಯಾ ಮೂಲಕ ಕೂಡಲೇ ಗೋವಾ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕರಿತರಲಾಯಿತು. ಸದ್ಯ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಈ ಮೀನುಗಾರನ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 
							 
			 
			 
			 
			 
		 
			 
			 
			 
			